<p><strong>ಚನ್ನಪಟ್ಟಣ:</strong> ತಾಲ್ಲೂಕಿನ ಕೋಡಂಬಹಳ್ಳಿ ಭಾಗದಲ್ಲಿ ಶನಿವಾರ ಸಾಯಂಕಾಲ ಬಿರುಗಾಳಿ ಮಿಶ್ರಿತ ಉತ್ತಮ ಮಳೆ ಸುರಿಯಿತು.</p><p><br>ಕೋಡಂಬಹಳ್ಳಿ, ಕೊಂಡಾಪುರ, ಹುಚ್ಚಯ್ಯನದೊಡ್ಡಿ, ಕರಲಹಳ್ಳಿ, ಅಂಚೀಪುರ, ಬಾಣಂತಹಳ್ಳಿ, ಎಲೆತೋಟದಹಳ್ಳಿ, ಬಲ್ಲಾಪಟ್ಟಣ, ಮಂಗಾಡಹಳ್ಳಿ, ಜೆ.ಬ್ಯಾಡರಹಳ್ಳಿ, ವಡ್ಡರಹಳ್ಳಿ, ವಿರುಪಾಕ್ಷಿಪುರ ಸೇರಿದಂತೆ ಕೆಲವೆಡೆ ಉತ್ತಮ ಮಳೆ ಆಯಿತು. ಹಾಗೆಯೇ ಶ್ಯಾನುಭೋಗನಹಳ್ಳಿ, ಸಿಂಗರಾಜಿಪುರ ಸೇರಿದಂತೆ ಕೆಲವೆಡೆ ಸಾಧಾರಣ ಮಳೆ ಸುರಿಯಿತು.</p>.<p>ಬಿರುಗಾಳಿ ಜತೆಗೆ ಮಳೆ ಬಂದ ಕಾರಣ ರೈತರ ಬೆಳೆಗಳಿಗೆ ಹಾನಿಯಾಗಿದೆ. ಕೆಲವೆಡೆ ಬಾಳೆ, ಜೋಳ, ಮಾವು, ಸೀಮೆಹುಲ್ಲು, ತೆಂಗಿನ ಬೆಳೆಗೆ ಹಾನಿಯಾದ ವರದಿಯಾಗಿದೆ. ಸಣ್ಣಪುಟ್ಟ ಮರಗಳು ಧರೆಗುರುಳಿವೆ.</p>.<p>ಶನಿವಾರ ಸುರಿದ ಮಳೆ ರೈತರ ಮುಖದಲ್ಲಿ ಸಂತಸ ತಂದಿತು. ಬಿಸಿಲ ಬೇಗೆಯಿಂದ ಬೇಸತ್ತಿದ್ದ ಭೂಮಿಗೆ ತಂಪನೆರೆಯಿತು.</p><p><br>ನಗರವೂ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆಯಾಗಿಲ್ಲ. ಬಿ.ವಿ.ಹಳ್ಳಿ ವ್ಯಾಪ್ತಿಯಲ್ಲಿ ಈ ವರ್ಷ ತುಂತುರು ಮಳೆ ಹೊರತುಪಡಿಸಿದರೆ ಈವರೆಗೆ ಇನ್ನೂ ಮಳೆಯಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ:</strong> ತಾಲ್ಲೂಕಿನ ಕೋಡಂಬಹಳ್ಳಿ ಭಾಗದಲ್ಲಿ ಶನಿವಾರ ಸಾಯಂಕಾಲ ಬಿರುಗಾಳಿ ಮಿಶ್ರಿತ ಉತ್ತಮ ಮಳೆ ಸುರಿಯಿತು.</p><p><br>ಕೋಡಂಬಹಳ್ಳಿ, ಕೊಂಡಾಪುರ, ಹುಚ್ಚಯ್ಯನದೊಡ್ಡಿ, ಕರಲಹಳ್ಳಿ, ಅಂಚೀಪುರ, ಬಾಣಂತಹಳ್ಳಿ, ಎಲೆತೋಟದಹಳ್ಳಿ, ಬಲ್ಲಾಪಟ್ಟಣ, ಮಂಗಾಡಹಳ್ಳಿ, ಜೆ.ಬ್ಯಾಡರಹಳ್ಳಿ, ವಡ್ಡರಹಳ್ಳಿ, ವಿರುಪಾಕ್ಷಿಪುರ ಸೇರಿದಂತೆ ಕೆಲವೆಡೆ ಉತ್ತಮ ಮಳೆ ಆಯಿತು. ಹಾಗೆಯೇ ಶ್ಯಾನುಭೋಗನಹಳ್ಳಿ, ಸಿಂಗರಾಜಿಪುರ ಸೇರಿದಂತೆ ಕೆಲವೆಡೆ ಸಾಧಾರಣ ಮಳೆ ಸುರಿಯಿತು.</p>.<p>ಬಿರುಗಾಳಿ ಜತೆಗೆ ಮಳೆ ಬಂದ ಕಾರಣ ರೈತರ ಬೆಳೆಗಳಿಗೆ ಹಾನಿಯಾಗಿದೆ. ಕೆಲವೆಡೆ ಬಾಳೆ, ಜೋಳ, ಮಾವು, ಸೀಮೆಹುಲ್ಲು, ತೆಂಗಿನ ಬೆಳೆಗೆ ಹಾನಿಯಾದ ವರದಿಯಾಗಿದೆ. ಸಣ್ಣಪುಟ್ಟ ಮರಗಳು ಧರೆಗುರುಳಿವೆ.</p>.<p>ಶನಿವಾರ ಸುರಿದ ಮಳೆ ರೈತರ ಮುಖದಲ್ಲಿ ಸಂತಸ ತಂದಿತು. ಬಿಸಿಲ ಬೇಗೆಯಿಂದ ಬೇಸತ್ತಿದ್ದ ಭೂಮಿಗೆ ತಂಪನೆರೆಯಿತು.</p><p><br>ನಗರವೂ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆಯಾಗಿಲ್ಲ. ಬಿ.ವಿ.ಹಳ್ಳಿ ವ್ಯಾಪ್ತಿಯಲ್ಲಿ ಈ ವರ್ಷ ತುಂತುರು ಮಳೆ ಹೊರತುಪಡಿಸಿದರೆ ಈವರೆಗೆ ಇನ್ನೂ ಮಳೆಯಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>