<p><strong>ಕುದೂರು</strong>:ದನ ಮೇಯಿಸುವ ಸಮಯದಲ್ಲಿ ಹಲ್ಲೆ ಮಾಡಿ ಸರಗಳ್ಳತನ ಮಾಡಿದ ಆರೋಪಿಯನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ. </p>.<p>ಘಟನೆ ವಿವರ: ಫೆ.28ರಂದು ಮಂಗಮ್ಮ ಎಂಬುವರು ಮಾದಿಗೊಂಡನಹಳ್ಳಿ ಬಳಿ ಬೆಟ್ಟದ ತಪ್ಪಲಿನಲ್ಲಿ ದನ ಮೇಯಿಸುತ್ತಿದ್ದಾಗ ವ್ಯಕ್ತಿಯೊಬ್ಬ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ತಾಳಿ, ಗುಂಡುಗಳಿರುವ ಕರಿಮಣಿ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದೂರು ದಾಖಲಾಗಿತ್ತು. </p>.<p>ಹಲ್ಲೆ ನಡೆಸಿ, ಕಳವು ಮಾಡಿದ ಆರೋಪಿ ಮಂಜುನಾಥ ಮಾಳಕ್ಕ ಎಂದು ಗುರುತಿಸಲಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. </p>.<p>ಬಂಧಿತ ಆರೋಪಿಯು ಬೆಳಗಾವಿ ಜಿಲ್ಲೆ ಕಡಣ ಶಿವಪುರ ನಿವಾಸಿ ಎಂದು ತಿಳಿದು ಬಂದಿದೆ. </p>.<p>ಉಪಾಧೀಕ್ಷಕ ಪ್ರವೀಣ್ ನೇತೃತ್ವದಲ್ಲಿ ಕುದೂರು ಠಾಣೆ ಪಿ.ಐ ನವೀನ್ ಬಿ., ಜಗದೀಶ್ ನಾಯ್ಕ ಪಿಎಸ್ಐ ಹಾಗೂ ಸಿಬ್ಬಂದಿ ಎಚ್.ಸಿ ಸೂರ್ಯಕುಮಾರ್, ಎಚ್.ಸಿ ಗುರುಮೂರ್, ಲೋಹಿತ್ ನ್ಯಾಮನ್ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುದೂರು</strong>:ದನ ಮೇಯಿಸುವ ಸಮಯದಲ್ಲಿ ಹಲ್ಲೆ ಮಾಡಿ ಸರಗಳ್ಳತನ ಮಾಡಿದ ಆರೋಪಿಯನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ. </p>.<p>ಘಟನೆ ವಿವರ: ಫೆ.28ರಂದು ಮಂಗಮ್ಮ ಎಂಬುವರು ಮಾದಿಗೊಂಡನಹಳ್ಳಿ ಬಳಿ ಬೆಟ್ಟದ ತಪ್ಪಲಿನಲ್ಲಿ ದನ ಮೇಯಿಸುತ್ತಿದ್ದಾಗ ವ್ಯಕ್ತಿಯೊಬ್ಬ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ತಾಳಿ, ಗುಂಡುಗಳಿರುವ ಕರಿಮಣಿ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದೂರು ದಾಖಲಾಗಿತ್ತು. </p>.<p>ಹಲ್ಲೆ ನಡೆಸಿ, ಕಳವು ಮಾಡಿದ ಆರೋಪಿ ಮಂಜುನಾಥ ಮಾಳಕ್ಕ ಎಂದು ಗುರುತಿಸಲಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. </p>.<p>ಬಂಧಿತ ಆರೋಪಿಯು ಬೆಳಗಾವಿ ಜಿಲ್ಲೆ ಕಡಣ ಶಿವಪುರ ನಿವಾಸಿ ಎಂದು ತಿಳಿದು ಬಂದಿದೆ. </p>.<p>ಉಪಾಧೀಕ್ಷಕ ಪ್ರವೀಣ್ ನೇತೃತ್ವದಲ್ಲಿ ಕುದೂರು ಠಾಣೆ ಪಿ.ಐ ನವೀನ್ ಬಿ., ಜಗದೀಶ್ ನಾಯ್ಕ ಪಿಎಸ್ಐ ಹಾಗೂ ಸಿಬ್ಬಂದಿ ಎಚ್.ಸಿ ಸೂರ್ಯಕುಮಾರ್, ಎಚ್.ಸಿ ಗುರುಮೂರ್, ಲೋಹಿತ್ ನ್ಯಾಮನ್ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>