<p><strong>ರಾಮನಗರ</strong>: ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ತಮ್ಮ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟುಕೊಂಡಿದ್ದ ₹17.20 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹2 ಲಕ್ಷ ನಗದನ್ನು ಕಳ್ಳರು ಕದ್ದಿದ್ದಾರೆ. ತಾಲ್ಲೂಕಿನ ಅವ್ವೇರಹಳ್ಳಿಯ ವಿಜಯಕುಮಾರ್ ಚಿನ್ನಾಭರಣ ಮತ್ತು ನಗದು ಕಳೆದುಕೊಂಡವರು. ಈ ಕುರಿತು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ವಿಜಯಕುಮಾರ್ ಅವರು ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ 190 ಗ್ರಾಂ ಚಿನ್ನಾಭರಣ ಅಡವಿಟ್ಟಿದ್ದರು. ಅ. 17ರಂದು ಬೆಳಿಗ್ಗೆ 11.30ರ ಚಿನ್ನಾಭರಣ ಬಿಡಿಸಿಕೊಂಡಿದ್ದ ಅವರು, ಅಲ್ಲಿಂದ ರಾಮನಗರದಲ್ಲಿರುವ ಎಸ್ಬಿಐ ಬ್ಯಾಂಕ್ಗೆ ಬಂದು ₹2 ಲಕ್ಷ ನಗದು ಡ್ರಾ ಮಾಡಿಕೊಂಡಿದ್ದರು.</p>.<p>ಚಿನ್ನಾಭರಣ, ಹಣ, ಚೆಕ್ ಬುಕ್, ಬ್ಯಾಂಕ್ ಪಾಸ್ಬುಕ್ ಒಳಗೊಂಡ ಬ್ಯಾಗ್ ಅನ್ನು ತಮ್ಮ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದರು. ಬಳಿಕ ಅಲ್ಲಲ್ಲಿ ಸ್ಕೂಟರ್ ನಿಲ್ಲಿಸಿ ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಿದ್ದರು.</p>.<p>ಮನೆಗೆ ಹೋದವರೇ ಸ್ಕೂಟರ್ ಡಿಕ್ಕಿ ತೆರೆದು ನೋಡಿದಾಗ ಬ್ಯಾಗ್ ಕಾಣಿಸಿಲ್ಲ. ವಿಜಯಕುಮಾರ್ ಅವರಿಗೆ ಗೊತ್ತಾಗದಂತೆ ಹಿಂಬಾಲಿಸಿರುವ ಕಳ್ಳರು, ಸ್ಕೂಟರ್ ನಿಲ್ಲಿಸಿದಾಗ ನಕಲಿ ಕೀ ಬಳಸಿಕೊಂಡು ಡಿಕ್ಕಿಯಲ್ಲಿದ್ದ ಬ್ಯಾಗ್ ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದರು.</p>.<p>ಕದ್ದಿರುವ ಒಡವೆಯಲ್ಲಿ 60 ಗ್ರಾಂ ಚಿನ್ನದ ಸರ, 30 ಗ್ರಾಂನ 2 ಬಳೆ, ಡಾಲರ್ ಸಮೇತ 60 ಗ್ರಾಂನ ನೆಕ್ಲೇಸ್, 40 ಗ್ರಾಂ ಚಿನ್ನದ ಮಣಿ ಸರ ಸೇರಿದೆ. ಕಳ್ಳರ ಪತ್ತೆಗಾಗಿ, ವಿಜಯಕುಮಾರ್ ಅವರು ಓಡಾಡಿರುವ ಹಾಗೂ ಸ್ಕೂಟರ್ ನಿಲ್ಲಿಸಿದ್ದ ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲೇ ಕಳ್ಳರನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದರು.</p>.<p><strong>ಟ್ರಾಕ್ಟರ್ ಪಲ್ಟಿ: ಚಾಲಕ ಸಾವು</strong></p>.<p>ಜಮೀನು ಸಮತಟ್ಟ ಮಾಡುತ್ತಿದ್ದ ಟ್ರಾಕ್ಟರ್ ದಿಬ್ಬ ಹತ್ತಿಸುವಾಗ ಹಿಮ್ಮುಖವಾಗಿ ಚಲಿಸಿ ಪಲ್ಟಿಯಾಗಿದ್ದರಿಂದ ಚಾಲಕ ಮೃತಪಟ್ಟಿರುವ ಘಟನೆ ರಾಮನಗರ ತಾಲ್ಲೂಕಿನ ಕಗ್ಗಲಹಳ್ಳಿಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಶಾಂತಿಗ್ರಾಮ ಹೋಬಳಿಯ ಹಲಸಿನಹಳ್ಳಿಯ ಸಣ್ಣೇಗೌಡ (58) ಮೃತ ಚಾಲಕ.</p>.<p>ಕಗ್ಗಲಹಳ್ಳಿಯ ಪ್ರಕಾಶ ಮತ್ತು ಗೋಪಾಲ ಎಂಬುವರ ಜಮೀನನ್ನು ಸಣ್ಣೇಗೌಡ ಸಮತಟ್ಟ ಮಾಡುತ್ತಿದ್ದರು. ಜಮೀನಿನಲ್ಲಿದ್ದ ದಿಬ್ಬ ಹತ್ತಿಸುವಾಗ ಟ್ರಾಕ್ಟರ್ ಏಕಾಏಕಿ ಹಿಮ್ಮುಖವಾಗಿ ಚಲಿಸಿದ್ದು, ಕೆಳಕ್ಕೆ ಬಿದ್ದ ಸಣ್ಣೇಗೌಡ ಅವರ ಮೇಲೆ ಬಿದ್ದಿದೆ.</p>.<p>ಗಂಭೀರವಾಗಿ ಗಾಯಗೊಂಡ ಕೂಡಲೇ ಅವರನ್ನು ರಾಮನಗರದ ರಾಮಕೃಷ್ಣ ಆಸ್ಪತ್ರೆಗೆ ಕರೆ ತರಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು, ಆಸ್ಪತ್ರೆಗೆ ತರುವುದಕ್ಕೆ ಮುಂಚೆಯೇ ಚಾಲಕ ಮೃತಪಟ್ಟಿರುವುದಾಗಿ ತಿಳಿಸಿದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ತಮ್ಮ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟುಕೊಂಡಿದ್ದ ₹17.20 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹2 ಲಕ್ಷ ನಗದನ್ನು ಕಳ್ಳರು ಕದ್ದಿದ್ದಾರೆ. ತಾಲ್ಲೂಕಿನ ಅವ್ವೇರಹಳ್ಳಿಯ ವಿಜಯಕುಮಾರ್ ಚಿನ್ನಾಭರಣ ಮತ್ತು ನಗದು ಕಳೆದುಕೊಂಡವರು. ಈ ಕುರಿತು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ವಿಜಯಕುಮಾರ್ ಅವರು ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ 190 ಗ್ರಾಂ ಚಿನ್ನಾಭರಣ ಅಡವಿಟ್ಟಿದ್ದರು. ಅ. 17ರಂದು ಬೆಳಿಗ್ಗೆ 11.30ರ ಚಿನ್ನಾಭರಣ ಬಿಡಿಸಿಕೊಂಡಿದ್ದ ಅವರು, ಅಲ್ಲಿಂದ ರಾಮನಗರದಲ್ಲಿರುವ ಎಸ್ಬಿಐ ಬ್ಯಾಂಕ್ಗೆ ಬಂದು ₹2 ಲಕ್ಷ ನಗದು ಡ್ರಾ ಮಾಡಿಕೊಂಡಿದ್ದರು.</p>.<p>ಚಿನ್ನಾಭರಣ, ಹಣ, ಚೆಕ್ ಬುಕ್, ಬ್ಯಾಂಕ್ ಪಾಸ್ಬುಕ್ ಒಳಗೊಂಡ ಬ್ಯಾಗ್ ಅನ್ನು ತಮ್ಮ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದರು. ಬಳಿಕ ಅಲ್ಲಲ್ಲಿ ಸ್ಕೂಟರ್ ನಿಲ್ಲಿಸಿ ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಿದ್ದರು.</p>.<p>ಮನೆಗೆ ಹೋದವರೇ ಸ್ಕೂಟರ್ ಡಿಕ್ಕಿ ತೆರೆದು ನೋಡಿದಾಗ ಬ್ಯಾಗ್ ಕಾಣಿಸಿಲ್ಲ. ವಿಜಯಕುಮಾರ್ ಅವರಿಗೆ ಗೊತ್ತಾಗದಂತೆ ಹಿಂಬಾಲಿಸಿರುವ ಕಳ್ಳರು, ಸ್ಕೂಟರ್ ನಿಲ್ಲಿಸಿದಾಗ ನಕಲಿ ಕೀ ಬಳಸಿಕೊಂಡು ಡಿಕ್ಕಿಯಲ್ಲಿದ್ದ ಬ್ಯಾಗ್ ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದರು.</p>.<p>ಕದ್ದಿರುವ ಒಡವೆಯಲ್ಲಿ 60 ಗ್ರಾಂ ಚಿನ್ನದ ಸರ, 30 ಗ್ರಾಂನ 2 ಬಳೆ, ಡಾಲರ್ ಸಮೇತ 60 ಗ್ರಾಂನ ನೆಕ್ಲೇಸ್, 40 ಗ್ರಾಂ ಚಿನ್ನದ ಮಣಿ ಸರ ಸೇರಿದೆ. ಕಳ್ಳರ ಪತ್ತೆಗಾಗಿ, ವಿಜಯಕುಮಾರ್ ಅವರು ಓಡಾಡಿರುವ ಹಾಗೂ ಸ್ಕೂಟರ್ ನಿಲ್ಲಿಸಿದ್ದ ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲೇ ಕಳ್ಳರನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದರು.</p>.<p><strong>ಟ್ರಾಕ್ಟರ್ ಪಲ್ಟಿ: ಚಾಲಕ ಸಾವು</strong></p>.<p>ಜಮೀನು ಸಮತಟ್ಟ ಮಾಡುತ್ತಿದ್ದ ಟ್ರಾಕ್ಟರ್ ದಿಬ್ಬ ಹತ್ತಿಸುವಾಗ ಹಿಮ್ಮುಖವಾಗಿ ಚಲಿಸಿ ಪಲ್ಟಿಯಾಗಿದ್ದರಿಂದ ಚಾಲಕ ಮೃತಪಟ್ಟಿರುವ ಘಟನೆ ರಾಮನಗರ ತಾಲ್ಲೂಕಿನ ಕಗ್ಗಲಹಳ್ಳಿಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಶಾಂತಿಗ್ರಾಮ ಹೋಬಳಿಯ ಹಲಸಿನಹಳ್ಳಿಯ ಸಣ್ಣೇಗೌಡ (58) ಮೃತ ಚಾಲಕ.</p>.<p>ಕಗ್ಗಲಹಳ್ಳಿಯ ಪ್ರಕಾಶ ಮತ್ತು ಗೋಪಾಲ ಎಂಬುವರ ಜಮೀನನ್ನು ಸಣ್ಣೇಗೌಡ ಸಮತಟ್ಟ ಮಾಡುತ್ತಿದ್ದರು. ಜಮೀನಿನಲ್ಲಿದ್ದ ದಿಬ್ಬ ಹತ್ತಿಸುವಾಗ ಟ್ರಾಕ್ಟರ್ ಏಕಾಏಕಿ ಹಿಮ್ಮುಖವಾಗಿ ಚಲಿಸಿದ್ದು, ಕೆಳಕ್ಕೆ ಬಿದ್ದ ಸಣ್ಣೇಗೌಡ ಅವರ ಮೇಲೆ ಬಿದ್ದಿದೆ.</p>.<p>ಗಂಭೀರವಾಗಿ ಗಾಯಗೊಂಡ ಕೂಡಲೇ ಅವರನ್ನು ರಾಮನಗರದ ರಾಮಕೃಷ್ಣ ಆಸ್ಪತ್ರೆಗೆ ಕರೆ ತರಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು, ಆಸ್ಪತ್ರೆಗೆ ತರುವುದಕ್ಕೆ ಮುಂಚೆಯೇ ಚಾಲಕ ಮೃತಪಟ್ಟಿರುವುದಾಗಿ ತಿಳಿಸಿದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>