ಯಾವ ಗ್ರಾಮದಲ್ಲಿ ಸರ್ಕಾರಿ ಶಾಲೆ ಮುಚ್ವುತ್ತದೊ ಅಲ್ಲಿ ಮಕ್ಕಳ ಸಂವಿಧಾನದತ್ತ ಹಕ್ಕು ಮೊಟಕುಗೊಳ್ಳುತ್ತದೆ. ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ. ಅದನ್ನು ಕುಡಿದವರು ಘರ್ಜಿಸಲೇಬೇಕು. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ವಿದ್ಯಾವಂತರು ದನಿ ಎತ್ತಬೇಕು.
– ಉಮೇಶ್ ಜಿ. ಗಂಗವಾಡಿ, ರಾಜ್ಯಾಧ್ಯಕ್ಷ, ಎಸ್ಡಿಎಂಸಿ ಸಮನ್ವಯ ವೇದಿಕೆ
ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಮಕ್ಕಳಿಗೆ ಶಿಕ್ಷಣ ಬೇಕಿದ್ದರೆ ಅಲ್ಲಿ ಶಾಲೆ ತೆರೆಯಬೇಕೆಂದು ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ ಹೇಳುತ್ತದೆ. ಅದನ್ನು ಮೀರಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಮಕ್ಕಳಿದ್ದರೂ ಶಾಲೆ ಮುಚ್ಚುವುದು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
– ಎಂ.ಎನ್. ಶ್ರೀರಾಮ್, ಮಾಜಿ ಅಧ್ಯಕ್ಷ ಎಐಡಿಎಸ್ಒ
ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ 94 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಿವೆ. ಈ ಅವಧಿಯಲ್ಲಿ 42 ಸಾವಿರ ಖಾಸಗಿ ಶಾಲೆಗಳು ತೆರೆದಿವೆ. ಸರ್ಕಾರಿ ಶಾಲೆ ನಡೆಯುತ್ತಿರುವುದು ಜನರ ಹಣದಿಂದ. ಅಂತಹ ಶಾಲೆಗಳನ್ನು ಮುಚ್ಚಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.
– ತುಳಜಾರಾಂ ಎನ್.ಕೆ, ರಾಜ್ಯ ಕಾರ್ಯದರ್ಶಿ, ಎಐಡಿಎಸ್ಒ
ಸಮಾವೇಶದಲ್ಲಿ ಭಾಗವಹಿಸಿದ್ದ ಪೋಷಕರು ಸಂಘಟನೆಗಳ ಮುಖಂಡರು ಹಾಗೂ ಸದಸ್ಯರು