ಸೋಮವಾರ, 11 ಆಗಸ್ಟ್ 2025
×
ADVERTISEMENT
ADVERTISEMENT

ಪಡಿತರ ಚೀಟಿ ತಿದ್ದುಪಡಿಗೆ ಗ್ರಹಣ; ಇಂದೇ ಕೊನೆ ದಿನ

ಗ್ರಾಮ ಒನ್‌ಗಳಿಗೆ ಇನ್ನು ಸಿಗದ ಲಾಗಿನ್ ಐ.ಡಿ; ತಿದ್ದುಪಡಿಗೆ ಬಂದವರು ವಾಪಸ್; ದಿನಾಂಕ ವಿಸ್ತರಣೆಗೆ ಒತ್ತಾಯ
Published : 13 ಅಕ್ಟೋಬರ್ 2023, 5:34 IST
Last Updated : 13 ಅಕ್ಟೋಬರ್ 2023, 5:34 IST
ಫಾಲೋ ಮಾಡಿ
Comments
ಪಡಿತರ ತಿದ್ದುಪಡಿ ಮಾಡಿಸುವುದಕ್ಕಾಗಿ ಬೆಳಿಗ್ಗೆಯಿಂದ ನಾಲ್ಕೈದು ಸಲ ಗ್ರಾಮ ಒನ್ ಕೇಂದ್ರಕ್ಕೆ ಬಂದು ಹೋಗಿದ್ದೇವೆ. ಆದರೆ ಅಲ್ಲಿನ ಸಿಬ್ಬಂದಿ ನಮಗೆ ಲಾಗಿನ್ ಐ.ಡಿ ಕೊಟ್ಟಿಲ್ಲ ಎಂದು ವಾಪಸ್ ಕಳಿಸಿದರು
– ಗೌರಮ್ಮ ರಾಮನಗರ
ಆಸ್ಪತ್ರೆ ಸೇರಿದಂತೆ ವಿವಿಧ ಕೆಲಸಗಳಿಗೆ ಪಡಿತರ ಚೀಟಿ ಅತ್ಯಗತ್ಯ. ಯಾವಾಗಲೋ ಒಮ್ಮೆ ತಿದ್ದುಪಡಿಗೆ ಅವಕಾಶ ಕೊಡುತ್ತಾರೆ. ಆದರೆ ಗ್ರಾಮ ಒನ್‌ ಕೇಂದ್ರಗಳಲ್ಲಿ ತಿದ್ದುಪಡಿಯನ್ನೇ ಮಾಡುತ್ತಿಲ್ಲ –
ನವೀನ್ ಪಾಲಬೋವಿದೊಡ್ಡಿ
ಪಡಿತರ ಚೀಟಿ ತಿದ್ದುಪಡಿಗಾಗಿ ಗ್ರಾಮ ಒನ್‌ ಕೇಂದ್ರಗಳಿಗೆ ತಕ್ಷಣ ಲಾಗಿನ್ ಐ.ಡಿ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಶುಕ್ರವಾರದಿಂದ ತಿದ್ದುಪಡಿ ಕೆಲಸ ಸರಾಗವಾಗಿ ನಡೆಯಲಿದೆ –
ರಮ್ಯ, ಉಪ ನಿರ್ದೇಶಕಿ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ
‘ಮಾಹಿತಿ ಪಡೆದರೂ ಲಾಗಿನ್ ಕೊಟ್ಟಿಲ್ಲ’
‘ಪಡಿತರ ಚೀಟಿ ತಿದ್ದುಪಡಿ ಲಾಗಿನ್ ಐ.ಡಿ ನೀಡುವುದಕ್ಕಾಗಿ ಅಧಿಕಾರಿಗಳು ಎರಡು ವಾರ ಮುಂಚೆಯೇ ನಮ್ಮಿಂದ ಅಗತ್ಯ ಮಾಹಿತಿ ಪಡೆದಿದ್ದರು. ಆದರೆ ತಿದ್ದುಪಡಿ ದಿನಾಂಕ ಬಂದರೂ ಕೊಡಲಿಲ್ಲ. ಈ ಕುರಿತು ಹೋಗಿ ವಿಚಾರಿಸಿ ಕಾದರೂ ಕೊಡಲಿಲ್ಲ. ಏನೊ ತಾಂತ್ರಿಕ ಸಮಸ್ಯೆ ಹೇಳಿ ಕಳಿಸಿದರು. ತಿದ್ದುಪಡಿಗೆ ಒಂದು ದಿನವಷ್ಟೇ ಬಾಕಿ ಉಳಿದಿದ್ದರೂ ಇನ್ನು ಐ.ಡಿ ಕೊಟ್ಟಿಲ್ಲ. ಜಿಲ್ಲಾಧಿಕಾರಿ ಕಚೇರಿಗೆ ಬಂದು ಕಾದು ಸಾಕಾಗಿ ವಾಪಸಾದೆವು’ ಎಂದು ಗ್ರಾಮ ಒನ್ ಕೇಂದ್ರ ನಡೆಸುವ ರಾಮನಗರ ತಾಲ್ಲೂಕಿನ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ತಾಂತ್ರಿಕ ಸಮಸ್ಯೆಯಿಂದ ವಿಳಂಬ’ ‘ಪಡಿತರ ಚೀಟಿ ತಿದ್ದುಪಡಿಗಾಗಿ ಸ್ವಯಂ ದೃಢೀಕರಣ ಪತ್ರ ಸೇರಿದಂತೆ ವಿವಿಧ ಮಾಹಿತಿಯನ್ನು 117 ಗ್ರಾಮ ಒನ್ ಕೇಂದ್ರದವರು ಕೊಟ್ಟಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಲಾಗಿನ್ ಐ.ಡಿ ಕೊಡಲು ವಿಳಂಬವಾಯಿತು. ಆದರೂ ಗುರುವಾರ ರಾತ್ರಿವರೆಗೆ ಒಂದಷ್ಟು ಮಂದಿಗೆ ಐ.ಡಿ ಕೊಟ್ಟಿದ್ದೇವೆ. ಉಳಿದವರೆಗೆ ನಾಳೆ ಕೊಡಲಾಗುವುದು. ಸಾರ್ವಜನಿಕರು ಆತಂಕಪಡಬೇಕಿಲ್ಲ. ಚೀಟಿ ತಿದ್ದುಪಡಿಗೆ ದಿನಾಂಕ ವಿಸ್ತರಣೆಯಾಗಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT