ಕಚೇರಿಯಲ್ಲಿ ಬೆಳಿಗ್ಗೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರನ್ನು ಭೇಟಿ ಮಾಡಿದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಫ್ರೂಟ್ ಐ.ಡಿ ಸೃಜನೆ ಕೆಲಸವು ತೋಟಗಾರಿಕೆ ಮತ್ತು ಕೃಷಿ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಇದೀಗ, ಅವರ ಕೆಲಸವನ್ನು ಹೆಚ್ಚುವರಿಯಾಗಿ ನಮಗೆ ಹೊರಿಸಲಾಗಿದೆ. ಇದರಿಂದಾಗಿ, ಸಿಬ್ಬಂದಿಗೆ ಅಧಿಕ ಕಾರ್ಯೋತ್ತಡವಾಗಿದೆ. ಅಲ್ಲದೆ, ವಿಳಂಬದ ಆರೋಪವನ್ನು ನಮ್ಮ ಮೇಲೆಯೇ ಹೊರಿಸಲಾಗುತ್ತಿದೆ ಎಂದು ದೂರಿದರು.