<p><strong>ಮಾಗಡಿ:</strong> ಮಾಗಡಿ- ಹುಲಿಯೂರುದುರ್ಗ ಮುಖ್ಯರಸ್ತೆ ಕೊಂಡಹಳ್ಳಿ ಗೇಟ್ ಸಮೀಪ ಸೋಮವಾರ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಎದುರಿನಿಂದ ಬದುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಹಿಂಬದಿ ಕುಳಿತಿದ್ದ ಮಗ ಸ್ಥಳದಲ್ಲಿ ಮೃತಪಟ್ಟು, ತಂದೆ ಗಾಯಗೊಂಡಿದ್ದಾನೆ.</p>.<p>ಕುಣಿಗಲ್ ತಾಲೂಕಿನ ನಾಗನಹಳ್ಳಿ ಗ್ರಾಮದ ಹರ್ಷ(14) ಸಾವನಪ್ಪಿದ ಬಾಲಕ. ಆತ ಮಾಗಡಿ ತಾಲ್ಲೂಕಿನ ದೋಣಕುಪ್ಪೆಯ ಸಿಎಂಎಸ್ ಮಾಡೆಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ.</p>.<p>ಬೈಕ್ ಚಲಾಯಿಸುತ್ತಿದ್ದ ಹರ್ಷ ತಂದೆ, ನಾಗೇಶ್ (51) ಸೊಂಟಕ್ಕೆ ಗಂಭಿರವಾದ ಪೆಟ್ಟು ಬಿದ್ದಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. </p>.<p>ಕಾರು ಸಿಮೆಂಟ್, ಕಬ್ಬಿಣ ತುಂಬಿಕೊಂಡು ಮಾಗಡಿ ಕಡೆಯಿಂದ ಹೊರಟಿತ್ತು. ಬೈಕ್ ಕುಣಿಗಲ್ ತಾಲ್ಲೂಕಿನ ನಾಗನಹಳ್ಳಿಯಿಂದ ಸೋಲೂರು ಹೋಬಳಿಯ ಬಂಡೆಮಠದತ್ತ ಹೊರಟಿತ್ತು.</p>.<p>ಡಿಕ್ಕಿ ರಭಸಕ್ಕೆ ಕಾರು ಮತ್ತು ಬೈಕ್ ರಸ್ತೆ ಪಕ್ಕದ ಹೊಲಕ್ಕೆ ಉರುಳಿ ಬಿದ್ದಿವೆ. ಹೆಲ್ಮೆಟ್ ಧರಿಸದ ಕಾರಣ ಹರ್ಷ ತಲೆಗೆ ಬಲವಾದ ಪೆಟ್ಟು ಬಿದ್ದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ. ಕಾರು ಚಾಲಕನ ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ:</strong> ಮಾಗಡಿ- ಹುಲಿಯೂರುದುರ್ಗ ಮುಖ್ಯರಸ್ತೆ ಕೊಂಡಹಳ್ಳಿ ಗೇಟ್ ಸಮೀಪ ಸೋಮವಾರ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಎದುರಿನಿಂದ ಬದುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಹಿಂಬದಿ ಕುಳಿತಿದ್ದ ಮಗ ಸ್ಥಳದಲ್ಲಿ ಮೃತಪಟ್ಟು, ತಂದೆ ಗಾಯಗೊಂಡಿದ್ದಾನೆ.</p>.<p>ಕುಣಿಗಲ್ ತಾಲೂಕಿನ ನಾಗನಹಳ್ಳಿ ಗ್ರಾಮದ ಹರ್ಷ(14) ಸಾವನಪ್ಪಿದ ಬಾಲಕ. ಆತ ಮಾಗಡಿ ತಾಲ್ಲೂಕಿನ ದೋಣಕುಪ್ಪೆಯ ಸಿಎಂಎಸ್ ಮಾಡೆಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ.</p>.<p>ಬೈಕ್ ಚಲಾಯಿಸುತ್ತಿದ್ದ ಹರ್ಷ ತಂದೆ, ನಾಗೇಶ್ (51) ಸೊಂಟಕ್ಕೆ ಗಂಭಿರವಾದ ಪೆಟ್ಟು ಬಿದ್ದಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. </p>.<p>ಕಾರು ಸಿಮೆಂಟ್, ಕಬ್ಬಿಣ ತುಂಬಿಕೊಂಡು ಮಾಗಡಿ ಕಡೆಯಿಂದ ಹೊರಟಿತ್ತು. ಬೈಕ್ ಕುಣಿಗಲ್ ತಾಲ್ಲೂಕಿನ ನಾಗನಹಳ್ಳಿಯಿಂದ ಸೋಲೂರು ಹೋಬಳಿಯ ಬಂಡೆಮಠದತ್ತ ಹೊರಟಿತ್ತು.</p>.<p>ಡಿಕ್ಕಿ ರಭಸಕ್ಕೆ ಕಾರು ಮತ್ತು ಬೈಕ್ ರಸ್ತೆ ಪಕ್ಕದ ಹೊಲಕ್ಕೆ ಉರುಳಿ ಬಿದ್ದಿವೆ. ಹೆಲ್ಮೆಟ್ ಧರಿಸದ ಕಾರಣ ಹರ್ಷ ತಲೆಗೆ ಬಲವಾದ ಪೆಟ್ಟು ಬಿದ್ದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ. ಕಾರು ಚಾಲಕನ ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>