ಇಂಡಿಯನ್ ಆರ್ಮಿ ಸೈನಿಕ ಕೆ.ಎನ್.ನರಸಿಂಹಮೂರ್ತಿ ಮಾತನಾಡಿ, ‘ಪ್ರತಿಯೊಬ್ಬ ಪ್ರಜೆಗೂ ಸೇನೆ ಬಗ್ಗೆ ತಿಳಿದಿರಬೇಕು. ಕೇವಲ ಆಗಸ್ಟ್ 15, ಜನವರಿ 26ಕ್ಕೆ ಮಾತ್ರ ಸೀಮಿತವಾಗಿರದೇ ವರ್ಷವಿಡೀ ಸೈನಿಕರನ್ನು ಬೆಂಬಲಿಸುವ ಕೆಲಸ ಮಾಡಬೇಕು. ದೇಶ ಭಕ್ತಿ ಎನ್ನುವುದು ಸೈನಿಕರಿಗೆ ಮಾತ್ರ ಸೀಮಿತವಾಗಿಲ್ಲ, ಪ್ರತಿಯೊಬ್ಬರಿಗೂ ಚಿಕ್ಕವಯಸ್ಸಿನಿಂದಲೇ ದೇಶಭಕ್ತಿ ಬರಬೇಕು, ಇದು ನಮ್ಮ ದೇಶ ಎಂಬ ಭಾವನೆ ಬರಬೇಕು’ ಎಂದು ತಿಳಿಸಿದರು.