ಕಮಲವೇ ಅಭ್ಯರ್ಥಿ; ಭಯದಿಂದ ಗಿಫ್ಟ್ ಹಂಚಿಕೆ’
‘‘ನಮಗೆ ಕಮಲ ಚಿಹ್ನೆಯೇ ಅಭ್ಯರ್ಥಿಯಾಗಿದ್ದು ಯಾರೇ ನಿಂತರೂ ಕೆಲಸ ಮಾಡುತ್ತೇವೆ. ತಳಮಟ್ಟದಲ್ಲಿ ಗ್ರಾಮ ಚಲೋ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಲಾಗುತ್ತಿದೆ. ಮೈತ್ರಿ ಪಕ್ಷ ಜೆಡಿಎಸ್ನವರು ಅವರ ಪಕ್ಷದಡಿ ಕೆಲಸ ಮಾಡುತ್ತಿದ್ದಾರೆ. ಪಕ್ಷದ ನಾಯಕರ ಸೂಚನೆ ಮೇರೆಗೆ ಅಗತ್ಯವಿದ್ದಾಗ ಇಬ್ಬರೂ ಸೇರಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ನವರು ಸೋಲಿನ ಭಯದಿಂದ ಈಗಲೇ ಮತದಾರರಿಗೆ ಉಡುಗೊರೆ ಹಂಚಲು ಶುರು ಮಾಡಿದ್ದಾರೆ. ಲೋಕಸಭಾ ಚುನಾವಣೆಗೆ ಮೊದಲ ಸಲ ಗಿಫ್ಟ್ ಹಂಚಿಕೆ ಶುರುವಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಆನಂದಸ್ವಾಮಿ ಪ್ರತಿಕ್ರಿಯಿಸಿದ್ದಾರೆ.