ಕೆಪಿಸಿಸಿ ಉಪಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, 13 ಕೋಮಿನವರು ಸೇರಿ ದೇವಾಲಯದ ಕಟ್ಟಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಸಲ ಮುಖ್ಯಮಂತ್ರಿ ಆಗಿದ್ದಾಗ ಒಕ್ಕಲಿಗರು, ವೀರಶೈವರು, ತಿಗಳರು ಸೇರಿದಂತೆ 35 ವಿವಿಧ ಜಾತಿಗಳಿಗೆ ಸಮುದಾಯ ಭವನ ಕಟ್ಟಿಸಿಕೊಳ್ಳಲು ಅನುದಾನ ನೀಡಿದ್ದರು. ಕೆಲವು ಸಮುದಾಯಗಳು ಉತ್ತಮ ಸಮುದಾಯ ಭವನಗಳನ್ನು ಕಟ್ಟಿಸಿದ್ದಾರೆ. ನಮ್ಮೂರು ಭಾವೈಕ್ಯದ ಸಂಕೇತ. ಇಂದಿಗೂ ನಮ್ಮ ಊರಿನವರು ಎಂದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಲ್ಲ ಎಂದರು.