‘ಪ್ರಮುಖ ರಾಜಕೀಯ ನಾಯಕರು ಪ್ರಚಾರಕ್ಕೆ ಬರಲಿಲ್ಲ ಎನ್ನುವುದು ಸುಳ್ಳು. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮುಖಂಡರಾದ ಸಿ.ಪಿ, ಯೋಗೇಶ್ವರ್, ಸುರೇಶ್ಕುಮಾರ್, ಅಶ್ವಥ್ನಾರಾಯಣ್, ಕೆ. ಶಿವರಾಂ, ಮುನಿರಾಜೇಗೌಡ ಸೇರಿದಂತೆ ಹಲವರು ಸಕ್ರಿಯರಾಗಿ ಮತಯಾಚನೆ ಮಾಡಿದ್ದರು. ರಾಮನಗರದಲ್ಲಿ ಸಮಾವೇಶ ನಡೆಸಲು ಬಿ.ಎಸ್. ಯಡಿಯೂರಪ್ಪ ಇದೇ 28ಕ್ಕೆ ದಿನಾಂಕ ನೀಡಿದ್ದರು. ಆದರೆ ಚಂದ್ರಶೇಖರ್ ಅವರೇ 31ಕ್ಕೆ ಸಮಾವೇಶ ನಡೆಸುವಂತೆ ಕೋರಿದ್ದರು’ ಎಂದು ಸ್ಪಷ್ಟನೆ ನೀಡಿದರು.