ರಾಮನಗರದ ಕೆಂಗಲ್ ಹನುಮಂತಯ್ಯ ವೃತ್ತದ ಬಳಿ ಇರುವ ಅರ್ಕಾವತಿ ಸೇತುವೆ ಬಳಿ ನಡೆಯುತ್ತಿರುವ 24X7 ಕುಡಿಯುವ ನೀರು ಯೋಜನೆಯ ಕಾಮಗಾರಿ
ರಾಮನಗರಕ್ಕೆ ನೀರು ಪೂರೈಕೆ ಮಾಡುವುದಕ್ಕಾಗಿ ಮಂಡ್ಯ ಜಿಲ್ಲೆಯ ಟಿ.ಕೆ. ಹಳ್ಳಿಯಲ್ಲಿ ನಿರ್ಮಿಸಿರುವ ನೀರು ಶುದ್ಧೀಕರಣ ಮತ್ತು ಪೂರೈಕೆ ಘಟಕ
ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ ರಾಮನಗರ
ಸದ್ಯದಲ್ಲೇ ಪ್ರಯೋಗಾರ್ಥ ಪೂರೈಕೆ
‘ಕುಡಿಯುವ ನೀರಿನ ಕಾಮಗಾರಿ ಬಹುತೇಕ ಮುಗಿಯುತ್ತಾ ಬಂದಿದೆ. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಪೈಪ್ಲೈನ್ ಅಳವಡಿಸಲು ಅನುಮತಿ ಸಿಗುವುದರಲ್ಲಿ ವಿಳಂಬ ಗ್ರಾಮಸ್ಥರ ವಿರೋಧ ಸೇರಿದಂತೆ ಕಾಮಗಾರಿ ಬೇಗನೆ ಮುಗಿಯಲು ಹಲವು ತೊಂದರೆಗಳು ಎದುರಾದವು. ಈಗ ಎಲ್ಲವನ್ನೂ ಪರಿಹರಿಸಲಾಗಿದ್ದು ಉಳಿಕೆ ಕೆಲಸಗಳು ಭರದಿಂದ ಸಾಗುತ್ತಿವೆ. ಫೆಬ್ರುವರಿ ಅಂತ್ಯಕ್ಕೆ ಪ್ರಯೋಗಾರ್ಥವಾಗಿ ನಗರಕ್ಕೆ 24X7ನೀರು ಪೂರೈಕೆಯಾಗಲಿದೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಹದಗೆಟ್ಟ ರಸ್ತೆಗಳಿಗೆ ಸಿಗದ ಮುಕ್ತಿ
ನೀರಿನ ಯೋಜನೆಗೆಆಗಿ ಪೈಪ್ಲೈನ್ ಹಾಗೂ ನೀರು ಸಂಪರ್ಕ ಕಾಮಗಾರಿಗಾಗಿ ನಗರದಾದ್ಯಂತ ರಸ್ತೆಗಳನ್ನು ಅಗೆಯಲಾಗಿದೆ. ಸರಿಯಾಗಿ ಮುಚ್ಚದೆ ತೇಪೆ ಹಾಕಿರುವುದರಿಂದ ಬಹುತೇಕ ರಸ್ತೆಗಳು ಗುಂಡಿಬಿದ್ದು ಹದಗೆಟ್ಟಿವೆ. ರಸ್ತೆಗಳನ್ನು ಸರಿಯಾಗಿ ದುರಸ್ತಿ ಮಾಡುವಂತೆ ನಗರಸಭೆ ವಿಶೇಷ ಸಭೆಯಲ್ಲಿ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅಲ್ಲದೆ ದುರಸ್ತಿ ಹಣವನ್ನು ನಗರಸಭೆಗೆ ಕೊಟ್ಟರೆ ಅವರು ಇಡೀ ರಸ್ತೆಯನ್ನು ಅಭಿವೃದ್ಧಿಪಡಿಸಲಿದ್ದಾರೆ ಎಂದು ಶಾಸಕರು ಮತ್ತು ಸಂಸದರು ಸೂಚಿಸಿದ್ದರು. ಹಣ ಹಸ್ತಾಂತರ ಕುರಿತು ಇನ್ನೂ ಅಂತಿಮವಾಗಿಲ್ಲ. ಈ ನಡುವೆ ರಸ್ತೆಗಳು ಮಾತ್ರ ದೂಳಿಡಿದಿವೆ. ರಸ್ತೆ ರಿಪೇರಿ ಬದಲು ದೂಳು ಏಳದಂತೆ ಪ್ರಮುಖ ರಸ್ತೆಗಳಿಗೆ ನೀರು ಹಾಯಿಸಲಾಗುತ್ತಿದೆ. ‘ನೀರು ಸಂಪರ್ಕ ಕಾಮಗಾರಿ ಇನ್ನೂ ಎರಡ್ಮೂರು ಕಿ.ಮೀ. ಬಾಕಿ ಇದೆ. ಎಲ್ಲವೂ ಮುಗಿದ ತಕ್ಷಣ ಒಮ್ಮೆಲೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಡಳಿಯ ಎಇಇ ಕುಸುಮಾ ತಿಳಿಸಿದರು.