<p><strong>ಮಾಗಡಿ</strong>: ಕಾಡುಪ್ರಾಣಿ ಬೇಟೆಗೆ ಹೋಗಿದ್ದಾಗ ನಾಡ ಬಂದೂಕಿನಿಂದ ಹಾರಿಸಿದ ಗುಂಡು ತೊಡೆಗೆ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕೆಬ್ಬೆಪಾಳ್ಯದಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ.</p><p>ಗ್ರಾಮದ ಪಾಂಡುರಂಗ (35) ಮೃತರು. ಸ್ನೇಹಿತ ಕಿರಣ್ ಅವರೊಂದಿಗೆ ಪಾಂಡುರಂಗ ಅವರು ತಮ್ಮ ನಾಡ ಬಂದೂಕಿನೊಂದಿಗೆ ಗ್ರಾಮದ ಹೊರವಲಯದಲ್ಲಿ ಬೇಟೆಗೆ ತೆರಳಿದ್ದರು. </p><p>ಇಬ್ಬರೂ ಒಂದೊಂದು ಜಾಗದಲ್ಲಿ ನಿಂತು ಪ್ರಾಣಿ ಬರುವುದನ್ನು ಗಮನಿಸುತ್ತಿದ್ದರು. ಈ ವೇಳೆ, ಕಾಡುಹಂದಿ ಪಾಂಡುರಂಗ ಅವರತ್ತ ಏಕಾಏಕಿ ನುಗ್ಗಿ ಬಂದಿದೆ. ಆಗ ಬಂದೂಕನ್ನು ಉಲ್ಟಾ ಮಾಡಿಕೊಂಡು ಹಂದಿಗೆ ಹೊಡೆಯಲು ಮುಂದಾಗಿದ್ದಾರೆ ಎಂದು ಮಾಗಡಿ ಠಾಣೆ ಪೊಲೀಸರು ತಿಳಿಸಿದರು.</p><p>ಏಟಿಗೆ ಸಿಗದೆ ಹಂದಿ ತಪ್ಪಿಸಿಕೊಂಡಿದ್ದರಿಂದ ಬಂದೂಕು ನೆಲಕ್ಕೆ ಬಡಿದು ಹಾರಿದ ಗುಂಡು ಪಾಂಡುರಂಗ ಅವರ ತೊಡೆಗೆ ತಗುಲಿದೆ. ನೋವಿನಿಂದ ಸ್ಥಳದಲ್ಲೇ ಕುಸಿದ ಅವರನ್ನು ಸ್ನೇಹಿತ ಕಿರಣ್, ಪಕ್ಕಕ್ಕೆ ಎತ್ತಿಕೊಂಡು ಹೋಗಿ ಆರೈಕೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.</p><p>ಮನೆಯವರಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ, ತುಂಬಾ ರಕ್ತಸ್ರಾವದಿಂದ ಪಾಂಡುರಂಗ ಕೊನೆಯುಸಿರೆಳೆದರು. ಮೃತರು ಅಕ್ರಮವಾಗಿ ನಾಡ ಬಂದೂಕು ಹೊಂದಿದ್ದರು ಎಂದು ತಿಳಿದು ಬಂದಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ</strong>: ಕಾಡುಪ್ರಾಣಿ ಬೇಟೆಗೆ ಹೋಗಿದ್ದಾಗ ನಾಡ ಬಂದೂಕಿನಿಂದ ಹಾರಿಸಿದ ಗುಂಡು ತೊಡೆಗೆ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕೆಬ್ಬೆಪಾಳ್ಯದಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ.</p><p>ಗ್ರಾಮದ ಪಾಂಡುರಂಗ (35) ಮೃತರು. ಸ್ನೇಹಿತ ಕಿರಣ್ ಅವರೊಂದಿಗೆ ಪಾಂಡುರಂಗ ಅವರು ತಮ್ಮ ನಾಡ ಬಂದೂಕಿನೊಂದಿಗೆ ಗ್ರಾಮದ ಹೊರವಲಯದಲ್ಲಿ ಬೇಟೆಗೆ ತೆರಳಿದ್ದರು. </p><p>ಇಬ್ಬರೂ ಒಂದೊಂದು ಜಾಗದಲ್ಲಿ ನಿಂತು ಪ್ರಾಣಿ ಬರುವುದನ್ನು ಗಮನಿಸುತ್ತಿದ್ದರು. ಈ ವೇಳೆ, ಕಾಡುಹಂದಿ ಪಾಂಡುರಂಗ ಅವರತ್ತ ಏಕಾಏಕಿ ನುಗ್ಗಿ ಬಂದಿದೆ. ಆಗ ಬಂದೂಕನ್ನು ಉಲ್ಟಾ ಮಾಡಿಕೊಂಡು ಹಂದಿಗೆ ಹೊಡೆಯಲು ಮುಂದಾಗಿದ್ದಾರೆ ಎಂದು ಮಾಗಡಿ ಠಾಣೆ ಪೊಲೀಸರು ತಿಳಿಸಿದರು.</p><p>ಏಟಿಗೆ ಸಿಗದೆ ಹಂದಿ ತಪ್ಪಿಸಿಕೊಂಡಿದ್ದರಿಂದ ಬಂದೂಕು ನೆಲಕ್ಕೆ ಬಡಿದು ಹಾರಿದ ಗುಂಡು ಪಾಂಡುರಂಗ ಅವರ ತೊಡೆಗೆ ತಗುಲಿದೆ. ನೋವಿನಿಂದ ಸ್ಥಳದಲ್ಲೇ ಕುಸಿದ ಅವರನ್ನು ಸ್ನೇಹಿತ ಕಿರಣ್, ಪಕ್ಕಕ್ಕೆ ಎತ್ತಿಕೊಂಡು ಹೋಗಿ ಆರೈಕೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.</p><p>ಮನೆಯವರಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ, ತುಂಬಾ ರಕ್ತಸ್ರಾವದಿಂದ ಪಾಂಡುರಂಗ ಕೊನೆಯುಸಿರೆಳೆದರು. ಮೃತರು ಅಕ್ರಮವಾಗಿ ನಾಡ ಬಂದೂಕು ಹೊಂದಿದ್ದರು ಎಂದು ತಿಳಿದು ಬಂದಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>