ಮಾಗಡಿ ಪಟ್ಟಣದ ತಟವಾಳು ಮುಖ್ಯರಸ್ತೆಯ ವಿನ್ನರ್ಸ್ ಶಾಲೆಯ ತಿರುವಿನಲ್ಲಿ ಕಸ ಎಸೆಯಲಾಗಿದ್ದು ಬಿಡಾಡಿ ದನಗಳು ಹಾಗೂ ನಾಯಿಗಳ ಕಾಟದಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಯಾಗಿ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.
14ನೇ ವಾರ್ಡ್ನ ಕೆಲವು ಮನೆಗಳಿಗೆ ನೀರು ಬಾರದ ಬಗ್ಗೆ ದೂರು ಕೇಳಿಬಂದಿತ್ತು. ವಾಟರ್ ಮ್ಯಾನ್ಗೆ ಈ ಬಗ್ಗೆ ತಿಳಿಸಿದ್ದು, ನಾಳೆಯಿಂದ ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ. ರಿಯಾಜ್, ಪುರಸಭಾ ಸದಸ್ಯ, 14ನೇ ವಾರ್ಡ್ 14ನೇ ವಾರ್ಡ್ನಲ್ಲಿ ನೀರಿನ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಅಧಿಕಾರಿಗಳ ಜತೆಗೆ ಚರ್ಚಿಸಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಶಿವರುದ್ರಯ್ಯ, ಮುಖ್ಯಾಧಿಕಾರಿ, ಪುರಸಭೆ