ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ರಾಮನಗರ | ಯುವನಿಧಿ: 7 ತಿಂಗಳಲ್ಲಿ ₹85.60 ಲಕ್ಷ ಪಾವತಿ

ಜಿಲ್ಲೆಯಲ್ಲಿದ್ದಾರೆ 2,881 ಪದವಿ–ಡಿಪ್ಲೋಮಾ ನಿರುದ್ಯೋಗಿಗಳು; ಕನಕಪುರದಲ್ಲಿ ಹೆಚ್ಚು, ಮಾಗಡಿಯಲ್ಲಿ ಕಡಿಮೆ
Published : 26 ಆಗಸ್ಟ್ 2024, 6:29 IST
Last Updated : 26 ಆಗಸ್ಟ್ 2024, 6:29 IST
ಫಾಲೋ ಮಾಡಿ
Comments
ಯೋಜನೆಯು 2022-23ನೇ ಸಾಲಿನಲ್ಲಿ ಪದವಿ ಮತ್ತು ಡಿಪ್ಲೋಮಾ ಪಾಸಾಗಿ ಆರು ತಿಂಗಳಿಂದ ಉದ್ಯೋಗ ಸಿಗದೇ ಇರುವವರಿಗೆ ಮಾತ್ರ ಅನ್ವಯ. ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದವರು ಮತ್ತು ಅಪ್ರೆಂಟಿಸ್‌ ಹುದ್ದೆಯಲ್ಲಿರುವವರು ಯೋಜನೆಯ ಲಾಭ ಸಿಗವುದಿಲ್ಲ. ಉದ್ಯೋಗವಿದ್ದರೂ ಯುವನಿಧಿ ಯೋಜನೆ ಲಾಭವನ್ನು ಪಡೆಯುವುದು ಗೊತ್ತಾದರೆ, ಅಂತಹ ಅಭ್ಯರ್ಥಿಗೆ ದಂಡ ವಿಧಿಸಲಾಗುತ್ತದೆ.
ಯುವನಿಧಿ ಜಾರಿಯಾದ ಬಳಿಕ ಯೋಜನೆ ಅರ್ಹರಾಗಿರುವವರು ತಪ್ಪದೆ ನೋಂದಣಿ ಮಾಡಿಕೊಳ್ಳಬೇಕು. ಈ ಕುರಿತು ಶಿಕ್ಷಣ ಸಂಸ್ಥೆಗಳ ಮಟ್ಟದಲ್ಲೇ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು
– ಕೆ. ರಾಜು ಜಿಲ್ಲಾಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
ಯುವನಿಧಿಗೆ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳು ಪ್ರತಿ ತಿಂಗಳು 25ರೊಳಗೆ ತಾವು ನಿರುದ್ಯೋಗಿಯಾಗಿರುವ ಕುರಿತು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಭತ್ಯೆ ಸಿಗುವುದಿಲ್ಲ
– ಗೋವಿಂದರಾಜು ಉದ್ಯೋಗಾಧಿಕಾರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ರಾಮನಗರ
ನೋಂದಣಿ ಹೇಗೆ?
ಅಭ್ಯರ್ಥಿಗಳು https://sevasindhu.karnataka.gov.in ಸೇವಾಸಿಂಧು ಪೋರ್ಟಲ್ ಬಾಪೂಜಿ ಸೇವಾ ಕೇಂದ್ರ ಕರ್ನಾಟಕ ಒನ್ ಸೇರಿದಂತೆ ಇತರೆ ಸೇವಾ ಕೇಂದ್ರಗಳಲ್ಲಿ ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ಅದಕ್ಕೆ ಯಾವುದೇ ಶುಲ್ಕವನ್ನು ಭರಿಸಬೇಕಾದ ಅಗತ್ಯವಿಲ್ಲ. ನೋಂದಣಿ ಮಾಡಿಕೊಳ್ಳುವಾಗ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಜೊತೆಗೆ ನೋಂದಣಿ ದಿನಾಂಕಕ್ಕೂ ಮುಂಚಿನ ತಮ್ಮ 6 ತಿಂಗಳ ಬ್ಯಾಂಕ್ ಖಾತೆಯ ವಹಿವಾಟು ಪ್ರತಿ ಸಲ್ಲಿಸಬೇಕು. ಇಲ್ಲದಿದ್ದರೆ ಅರ್ಜಿ ತಿರಸ್ಕಾರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT