<p><strong>ಕುದೂರು (ಮಾಗಡಿ</strong>): ‘ಸಾಹಸ ಕಲೆಗ-ಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸು-ವುದರಿಂದ ಅವರಲ್ಲಿ ಧೈರ್ಯ ಹೆಚ್ಚು-ತ್ತದೆ’ ಎಂದು ತಾಲ್ಲೂಕು ಕರಾಟೆ ಅಕಾ-ಡೆಮಿ ಮುಖ್ಯಸ್ಥ ಸೆನ್ಸಾಯಿ ರಮೇಶ್ ತಿಳಿಸಿದರು.<br /> <br /> ತಾಲ್ಲೂಕಿನ ಕುದೂರು ಗ್ರಾಮದ ಮಹಂತೇಶ್ವರ ಆಂಗ್ಲ ಮಾಧ್ಯಮ ಶಾಲೆ-ಯಲ್ಲಿ ಬೇಸಿಗೆ ಶಿಬಿರದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಪರ್ವತಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಬಾಲ್ಯದಲ್ಲಿ ಮಕ್ಕಳಿಗೆ ಕಲಿಯುವ ಹುಮ್ಮಸು ಇರುವುದರಿಂದ ಈ ಅವಧಿ-ಯಲ್ಲಿಯೇ ಅವರಿಗೆ ವಿವಿಧ ಕಲೆಗಳನ್ನು ಕರಗತ ಮಾಡಿಸಬೇಕು’ ಎಂದರು.<br /> <br /> ಸ್ಥಳೀಯರ ಸಹಾಯದ ಮೂಲಕ 2000 ಅಡಿಗಳಿಗೂ ಹೆಚ್ಚು ಎತ್ತರದ ಭೈರವನ ದುರ್ಗ ಬೆಟ್ಟದ ತುದಿಯ ವರೆಗೆ ನೂರಾರು ವಿದ್ಯಾರ್ಥಿಗಳು ಮತ್ತು ಕರಾಟೆ ಶಿಕ್ಷಕರು ಹತ್ತುವ ಮೂಲಕ ಸಾಹಸ ಮೆರೆದರು. <br /> <br /> ಕಾಡು ದಾರಿಯಲ್ಲಿ ಕಾಣಿಸಿದ ಹಂದಿ, ಗುಬ್ಬಿ, ಗೊರವಾಂಕ, ಗೀಜಗ, ಮೊಲ, ಬಸವನ ಹುಳುಗಳನ್ನು ಕಂಡು ಮಕ್ಕಳು ಸಂತಸಪಟ್ಟರು. ಮೂರನೇ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾವಹಿಸಿದ್ದರು.<br /> <br /> ಭೈರವ ದುರ್ಗದ ಮೇಲೆ ಕೆಂಪೇಗೌಡರ ಕಾಲದ ಸಾಮಂತರು ಆಳಿದ ಕೋಟೆ, ನಾಲ್ಕು ಕಾಲಿನ ಮಂಟಪ , ಗೋಪುರ ಮತ್ತು ರಾಜರ ಕಾಲದ ಗುಪ್ತ ಗುಹೆ, ಕಲ್ಯಾಣಿಯ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುದೂರು (ಮಾಗಡಿ</strong>): ‘ಸಾಹಸ ಕಲೆಗ-ಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸು-ವುದರಿಂದ ಅವರಲ್ಲಿ ಧೈರ್ಯ ಹೆಚ್ಚು-ತ್ತದೆ’ ಎಂದು ತಾಲ್ಲೂಕು ಕರಾಟೆ ಅಕಾ-ಡೆಮಿ ಮುಖ್ಯಸ್ಥ ಸೆನ್ಸಾಯಿ ರಮೇಶ್ ತಿಳಿಸಿದರು.<br /> <br /> ತಾಲ್ಲೂಕಿನ ಕುದೂರು ಗ್ರಾಮದ ಮಹಂತೇಶ್ವರ ಆಂಗ್ಲ ಮಾಧ್ಯಮ ಶಾಲೆ-ಯಲ್ಲಿ ಬೇಸಿಗೆ ಶಿಬಿರದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಪರ್ವತಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಬಾಲ್ಯದಲ್ಲಿ ಮಕ್ಕಳಿಗೆ ಕಲಿಯುವ ಹುಮ್ಮಸು ಇರುವುದರಿಂದ ಈ ಅವಧಿ-ಯಲ್ಲಿಯೇ ಅವರಿಗೆ ವಿವಿಧ ಕಲೆಗಳನ್ನು ಕರಗತ ಮಾಡಿಸಬೇಕು’ ಎಂದರು.<br /> <br /> ಸ್ಥಳೀಯರ ಸಹಾಯದ ಮೂಲಕ 2000 ಅಡಿಗಳಿಗೂ ಹೆಚ್ಚು ಎತ್ತರದ ಭೈರವನ ದುರ್ಗ ಬೆಟ್ಟದ ತುದಿಯ ವರೆಗೆ ನೂರಾರು ವಿದ್ಯಾರ್ಥಿಗಳು ಮತ್ತು ಕರಾಟೆ ಶಿಕ್ಷಕರು ಹತ್ತುವ ಮೂಲಕ ಸಾಹಸ ಮೆರೆದರು. <br /> <br /> ಕಾಡು ದಾರಿಯಲ್ಲಿ ಕಾಣಿಸಿದ ಹಂದಿ, ಗುಬ್ಬಿ, ಗೊರವಾಂಕ, ಗೀಜಗ, ಮೊಲ, ಬಸವನ ಹುಳುಗಳನ್ನು ಕಂಡು ಮಕ್ಕಳು ಸಂತಸಪಟ್ಟರು. ಮೂರನೇ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾವಹಿಸಿದ್ದರು.<br /> <br /> ಭೈರವ ದುರ್ಗದ ಮೇಲೆ ಕೆಂಪೇಗೌಡರ ಕಾಲದ ಸಾಮಂತರು ಆಳಿದ ಕೋಟೆ, ನಾಲ್ಕು ಕಾಲಿನ ಮಂಟಪ , ಗೋಪುರ ಮತ್ತು ರಾಜರ ಕಾಲದ ಗುಪ್ತ ಗುಹೆ, ಕಲ್ಯಾಣಿಯ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>