ಗುರುಮರಡಿ ಹಾಗೂ ನಂದಿಹಳ್ಳಿ ಗ್ರಾಮದ ಗಡಿಯಲ್ಲಿದ್ದ ಆನೆಯನ್ನು ಸೆರೆಹಿಡಿಯಲು ದುಬಾರೆ ಹಾಗೂ ಮತ್ತಿಗೋಡು ಶಿಬಿರದಿಂದ ಅಭಿಮನ್ಯು, ಗೋಪಾಲ ಸ್ವಾಮಿ, ಸಕ್ರೆಬೈಲು ಬಿಡಾರದ ಬಾಲಣ್ಣ ಮತ್ತು ಸಾಗರ ಆನೆಗಳನ್ನು ಬಳಸಿಕೊಳ್ಳಲಾಗಿತ್ತು. ಜೋಗಿಮಟ್ಟಿ ಕಾಡಿನಲ್ಲಿ 30 ಅರಣ್ಯ ಇಲಾಖೆ ಸಿಬ್ಬಂದಿಯ ಸಹಾಯದಿಂದ ಪುಂಡಾನೆಯನ್ನು ಸೆರೆಹಿಡಿಯಲಾಗಿದೆ.