ವಾರದಿಂದ ಅನಾರೋಗ್ಯ:‘ಚೆನ್ನಾಗಿಯೇ ಇದ್ದ ಯಶವಂತ ಕಳೆದ ಸೋಮವಾರ ಏಕಾಏಕಿ ವಾಂತಿ ಮಾಡಿಕೊಂಡಿದ್ದನು. ಆಗ ಮೃಗಾಲಯದ ವೈದ್ಯರು ಚಿಕಿತ್ಸೆ ನೀಡಿದ್ದರು. ಮೇಲ್ನೋಟಕ್ಕೆ ಆರೋಗ್ಯವಾಗಿ ಕಾಣುತ್ತಿದ್ದ ಯಶವಂತ ಗುರುವಾರದಿಂದ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದನು. ಪರೀಕ್ಷೆ ನಡೆಸಿದಾಗ ಸಿಂಹದ ರಕ್ತದಲ್ಲಿ ಪ್ರೊಟೊಝೋವಾ ಸೋಂಕಿನಿಂದ ಪ್ಲೆಟ್ಲೆಟ್ಸ್ಗಳಲ್ಲಿ ಕೊರತೆ ಉಂಟಾಗಿರುವುದು ಕಂಡು ಬಂದಿತ್ತು‘ ಎಂದು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮುಕುಂದ್ ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.