ಬೆಳಿಗ್ಗೆ 6.30ಕ್ಕೆ ವಾಲ್ಮೀಕಿ ಜನಾಂಗದವರು ಪೂಜೆ ಸಲ್ಲಿಸಿದರು. ಉಪ್ಪಾರರು, ಮಡಿವಾಳರು, ಮುಂದಿನ ಎರಡು ದಿನಗಳ ಕಾಲಗದ್ದುಗೆಯಲ್ಲಿರುವ ಅಮ್ಮನವರಿಗೆ ಸರತಿಯಂತೆ ಪೂಜೆ ಸಲ್ಲಿಸುವರು. ಮಾರ್ಚ್ 26ರಂದು ರಾತ್ರಿ 8ಕ್ಕೆ ಅಮ್ಮನವರ ರಾಜಬೀದಿ ಉತ್ಸವ ಗಾಂಧಿ ಬಜಾರ್, ಬಿ.ಎಚ್. ರಸ್ತೆ, ಟ್ಯಾಂಕ್ ಬಂಡ್ ರಸ್ತೆಯಿಂದ ಹೊನ್ನಾಳಿ ರಸ್ತೆ ಸೇತುವೆ ಮೂಲಕ ಸಾಗಿ ಅರಣ್ಯದಲ್ಲಿ ಮೂರ್ತಿ ವಿಸರ್ಜಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳುತ್ತದೆ.