ದಾವಣಗೆರೆ ಜಿಲ್ಲೆಯ ಸವಳಂಗದಲ್ಲಿ ನ.2ರಂದು ಬೈಕ್ವೊಂದನ್ನು ಕಳವು ಮಾಡಿದ್ದ ಆರೋಪಿಗಳು ನ.5ರ ಬೆಳಗಿನ ಜಾವ ಶಿವಮೊಗ್ಗ ನಗರದ 4 ಕಡೆ, ಭದ್ರಾವತಿ ನಗರದ ಮೂರು ಕಡೆಗಳಲ್ಲಿ ಮನೆಗಳ ಕಳವು ಮಾಡಿದ್ದರು. ವಿಳಾಸ ಕೇಳುವ, ಬೆಂಕಿ ಪೊಟ್ಟಣ ಕೇಳುವ ನೆಪದಲ್ಲಿ ಚಾಕು ತೋರಿಸಿ ಬೆದರಿಸಿ, ಜನರಿಂದ ನಗದು, ಮೊಬೈಲ್ ಫೋನ್ ಹಾಗೂ ಬಂಗಾರದ ಸರ ಸುಲಿಗೆ ಮಾಡಿದ್ದರು.