ಬಿ.ಎಚ್ ರಸ್ತೆಯ ಖಾಸಗಿ ಹೋಟೆಲ್ ಬಳಿ, ‘ಹಲಾಲ್ ಹೆಸರಿನಲ್ಲಿ ನಡೆಯುವ ಆಹಾರ ಸೇವಿಸಬೇಡಿ‘ ಎಂದು ಬುಧವಾರ ಪ್ರಚಾರ ನಡೆಸಿದ್ದರು. ‘ಬಜರಂಗದಳದ ಕಾರ್ಯ
ಕರ್ತರಾದ ವಡಿವೇಲು, ಸವಾಯ್, ವೆಂಕಟೇಶ, ಗುಂಡಪ್ಪ, ಶ್ರೀಕಾಂತ್, ಸಂಜು, ಮಂಜು, ಲೋಕೇಶ್ ಅವರ ವಿರುದ್ಧ ಮುಸಲ್ಮಾನರ ಅಂಗಡಿ ಮುಂದೆ ಗಲಾಟೆ ಮಾಡಿದ್ದರು. ಹಲ್ಲೆ ನಡೆದಿಲ್ಲ. ಎಲ್ಲರನ್ನೂ ಬಂಧಿಸಿ, ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಹೇಳಿದರು.