ವಾಹನ ದಟ್ಟಣೆ: ರಾಣೆಬೆನ್ನೂರು–ಬೈಂದೂರು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ವಾಹನ ದಟ್ಟಣೆ ಹೆಚ್ಚಿದೆ. ಸಾಗರ ಹೊಸನಗರ ಮಾರ್ಗವಾಗಿ ಪ್ರವಾಸಿಗರ ವಾಹನಗಳು ಕೂಡ ಹೆಚ್ಚು ಸಂಚರಿಸುತ್ತವೆ. ಅಲ್ಲದೆ ಮಾರುತಿಪುರ, ಹರತಾಳು, ಪುರಪ್ಪೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಗ್ರಾಮಗಳ ಜನ ತಾಲ್ಲೂಕು ಕೇಂದ್ರ ಹೊಸನಗರಕ್ಕೆ ಸಂಪರ್ಕಕ್ಕೆ ಇದೇ ಹೆದ್ದಾರಿ ರಹದಾರಿಯಾಗಿದೆ.