<p><strong>ಶಿವಮೊಗ್ಗ</strong>: ಲೋಕಸಭೆ ಚುನಾವಣೆಯ ಪ್ರಚಾರದ ಭರಾಟೆಯ ನಡುವೆ ನಟ ಶಿವರಾಜ್ ಕುಮಾರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿ ಕಾಲ ಕಳೆದರು.</p><p>ಶಿವಮೊಗ್ಗ ಸಮೀಪದ ಸಕ್ರೆಬೈಲಿನ ಆನೆ ಬಿಡಾರಕ್ಕೆ ಬಂದ ಶಿವರಾಜಕುಮಾರ್ ದಂಪತಿ ಹಾಗೂ ಮಕ್ಕಳು ಕೆಲಕಾಲ ಅನೆಗಳೊಂದಿಗೆ ಸಮಯ ಕಳೆದರು.</p><p>ಬಿಡಾರದ ಆನೆಗಳ ಬಗ್ಗೆ ಆಯಾ ಮಾವುತರಿಂದ ಮಾಹಿತಿ ಪಡೆದುಕೊಂಡರು.</p><p>ಆನೆಗಳಿಗೆ ದಂಪತಿ ಕಬ್ಬು ತಿನ್ನಿಸಿದರು. ಫೋಟೊ ತೆಗೆಸಿಕೊಂಡರು. ನಂತರ ಆನೆ ಸವಾರಿ ಮಾಡಿದರು. ಅಲ್ಲಿಯೇ ಸಮೀಪದ ತುಂಗಾ ನದಿ ಹಿನ್ನೀರಿನಲ್ಲಿ ದೋಣಿ ವಿಹಾರ ನಡೆಸಿ ಆನಂದಿಸಿದರು.</p><p><strong>ಸೆಲ್ಪಿಗೆ ಮುಗಿಬಿದ್ದ ಜನ:</strong></p><p>ನಟ ಶಿವರಾಜ್ ಕುಮಾರ್ ಅವರು ಆನೆ ಬಿಡಾರಕ್ಕೆ ಬಂದಾಗ ಪ್ರವಾಸಿಗರು ಅವರೊಂದಿಗೆ ಸೆಲ್ಫಿ ತೆಗೆಯಿಸಿಕೊಳ್ಳಲು ಮುಗಿಬಿದ್ದರು.</p><p>ಶಿವರಾಜ್ ಕುಮಾರ್ಗೆ ಜೈ, ಅಣ್ಣಾವ್ರ ಮಗನಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. </p><p>ಭಾನುವಾರ ರಜೆಯ ಕಾರಣ ಆನೆ ಬಿಡಾರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ನಟ ಶಿವರಾಜ ಕುಮಾರ್ ನೋಡಿ ಅವರಲ್ಲಿ ಖುಷಿ ಇಮ್ಮಡಿಗೊಂಡಿತು.</p><p>ಈ ವೇಳೆ ಸಚಿವ ಮಧು ಬಂಗಾರಪ್ಪ ಕೂಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಲೋಕಸಭೆ ಚುನಾವಣೆಯ ಪ್ರಚಾರದ ಭರಾಟೆಯ ನಡುವೆ ನಟ ಶಿವರಾಜ್ ಕುಮಾರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿ ಕಾಲ ಕಳೆದರು.</p><p>ಶಿವಮೊಗ್ಗ ಸಮೀಪದ ಸಕ್ರೆಬೈಲಿನ ಆನೆ ಬಿಡಾರಕ್ಕೆ ಬಂದ ಶಿವರಾಜಕುಮಾರ್ ದಂಪತಿ ಹಾಗೂ ಮಕ್ಕಳು ಕೆಲಕಾಲ ಅನೆಗಳೊಂದಿಗೆ ಸಮಯ ಕಳೆದರು.</p><p>ಬಿಡಾರದ ಆನೆಗಳ ಬಗ್ಗೆ ಆಯಾ ಮಾವುತರಿಂದ ಮಾಹಿತಿ ಪಡೆದುಕೊಂಡರು.</p><p>ಆನೆಗಳಿಗೆ ದಂಪತಿ ಕಬ್ಬು ತಿನ್ನಿಸಿದರು. ಫೋಟೊ ತೆಗೆಸಿಕೊಂಡರು. ನಂತರ ಆನೆ ಸವಾರಿ ಮಾಡಿದರು. ಅಲ್ಲಿಯೇ ಸಮೀಪದ ತುಂಗಾ ನದಿ ಹಿನ್ನೀರಿನಲ್ಲಿ ದೋಣಿ ವಿಹಾರ ನಡೆಸಿ ಆನಂದಿಸಿದರು.</p><p><strong>ಸೆಲ್ಪಿಗೆ ಮುಗಿಬಿದ್ದ ಜನ:</strong></p><p>ನಟ ಶಿವರಾಜ್ ಕುಮಾರ್ ಅವರು ಆನೆ ಬಿಡಾರಕ್ಕೆ ಬಂದಾಗ ಪ್ರವಾಸಿಗರು ಅವರೊಂದಿಗೆ ಸೆಲ್ಫಿ ತೆಗೆಯಿಸಿಕೊಳ್ಳಲು ಮುಗಿಬಿದ್ದರು.</p><p>ಶಿವರಾಜ್ ಕುಮಾರ್ಗೆ ಜೈ, ಅಣ್ಣಾವ್ರ ಮಗನಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. </p><p>ಭಾನುವಾರ ರಜೆಯ ಕಾರಣ ಆನೆ ಬಿಡಾರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ನಟ ಶಿವರಾಜ ಕುಮಾರ್ ನೋಡಿ ಅವರಲ್ಲಿ ಖುಷಿ ಇಮ್ಮಡಿಗೊಂಡಿತು.</p><p>ಈ ವೇಳೆ ಸಚಿವ ಮಧು ಬಂಗಾರಪ್ಪ ಕೂಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>