ಭದ್ರಾವತಿ: ಅಣಬೆ ಕಡಿಮೆ ಜಾಗದಲ್ಲಿ ಅಧಿಕ ಲಾಭ ಗಳಿಸುವ ಬೆಳೆಯಾಗಿದ್ದು, ವಿಟಮಿನ್ ಬಿ ಪ್ರೋಟಿನ್ ಹೇರಳವಾಗಿರುತ್ತದೆ ಎಂದು ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ರವಿಕುಮಾರ್ ತಿಳಿಸಿದರು.
ನಗರದ ಸೇಂಟ್ ಚಾರ್ಲ್ಸ್ ಸಂಸ್ಥೆಯ ಕರುಣಾ ಸೇವಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಅಣಬೆ ಉತ್ಪಾದನಾ ತರಬೇತಿ ಮತ್ತು ಚಿಕ್ಕ ಒಕ್ಕೂಟ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ವಯಸ್ಕರಿಗೂ, ಗರ್ಭಿಣಿಯರಿಗೂ, ಮಕ್ಕಳಿಗೂ, ಸಕ್ಕರೆ ಕಾಯಿಲೆಯವರಿಗೂ, ದೇಹವನ್ನು ಕರಗಿಸಲು ಇದು ಸೂಕ್ತ ಬೆಳೆ ಎಂದು ತಿಳಿಸಿದರು.
ಅಣಬೆ ಹೇಗೆ ಬೆಳೆಯುವುದು ಎಂದು ತರಬೇತಿ ನೀಡುವುದರ ಮೂಲಕ ತೋರಿಸಿಕೊಟ್ಟರು.
ಕರುಣಾಸೇವಾ ಕೇಂದ್ರದ ನಿರ್ದೇಶಕಿ ಸಿಸ್ಟರ್ ಹೆಲೆನ್ ಮೊರಸ್, ವಿಶೇಷ ಅಗತ್ಯತೆ ಉಳ್ಳ ಮಕ್ಕಳ ಮುಖ್ಯಸ್ಥೆ ಸಿಸ್ಟರ್ ಪ್ರಭ, ಕಾರ್ಯಕರ್ತೆಯರಾದ ಗ್ರೇಸಿ, ವಿನ್ನಿ, ಧನಲಕ್ಷ್ಮಿ ಹಾಗೂ 150ಕ್ಕೂ ಅಧಿಕ ಮಹಿಳೆಯರು ಇತರಬೇತಿಯಲ್ಲಿ ಪಾಲ್ಗೊಂಡಿದ್ದರು.