ಬ್ಯಾಕೋಡು, ಹೊಸಕೊಪ್ಪ, ಕಾರಣಿ ಭಾಗದ 20 ಸಾವಿರಕ್ಕೂ ಅಧಿಕ ಜನರಿಗೆ ಯಾವುದೇ ಆಂಬುಲೆನ್ಸ್ ಸೇವೆ ಇಲ್ಲ.ತುರ್ತು ಸಂದರ್ಭದಲ್ಲಿ ಅವರು ತುಮರಿ ಭಾಗದಿಂದಲೇ ಆಂಬುಲೆನ್ಸ್ ಸೇವೆ ಪಡೆಯಬೇಕು. ಅದು ಬರುವುದಕ್ಕೆ ಕಾಯಬೇಕು.ಮೂಲಸೌಕರ್ಯ ವಂಚಿತ ಹಳ್ಳಿಗಳಾದ ಕುದರೂರು, ಕಟ್ಟಿನಕಾರು, ಸುಳ್ಳಳ್ಳಿ, ಹೊಸಕೊಪ್ಪದ ಜನರ ತುರ್ತು ಪರಿಸ್ಥಿತಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ತುಮರಿಯಿಂದ ಅಂಬುಲೆನ್ಸ್ ಬರುವ ಹೊತ್ತಿಗೆ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಹೇಳುತ್ತಾರೆ ಗ್ರಾಮಸ್ಥರಾದಆನಂದ್ ಬಾಳ, ಕೃಷ್ಣಮೂರ್ತಿ.