ದೇಶದಲ್ಲಿ ಏನೇ ಅಹಿತಕರ ಘಟನೆಗಳು, ಅನಾಹುತ, ಪ್ರಕೃತಿ ವಿಕೋಪ, ನೆರೆ, ಗಲಭೆ ಪ್ರಕರಣಗಳು ನಡೆದಾಗ, ಅಲ್ಲಿಗೆ ತಕ್ಷಣ ಆರ್ಎಎಫ್ ಸಿಬ್ಬಂದಿ ತೆರಳಿ ತಮ್ಮ ಜೀವದ ಹಂಗು ತೊರೆದು ರಕ್ಷಣಾ ಕಾರ್ಯ ಕೈಗೊಳ್ಳುತ್ತಾರೆ. ಗಲಭೆಪೀಡಿತ ಸ್ಥಳದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಇವರ ಸೇವೆ ಸಾರ್ಥಕ ಎಂದು ಶ್ಲಾಘಿಸಿದರು.