<p><strong>ಶಿವಮೊಗ್ಗ:</strong> ಕಾರ್ಖಾನೆ ಮುಚ್ಚಿದ ನಂತರವೂ ಕಾರ್ಮಿಕರಿಗೆ ಸೇರಬೇಕಿದ್ದ ಪರಿಹಾರವನ್ನು ತಲುಪಿಸಿದ್ದು ಇದೇ ಮೊದಲು. ತುಂಗಭದ್ರಾ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಕ್ರಮ ಶ್ಲಾಘನೀಯ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.</p>.<p>ಭಾನುವಾರ ಇಲ್ಲಿನ ಸಂತ ಥಾಮಸ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಕ್ಕರೆ ಕಾರ್ಖಾನೆಯ ಕಾರ್ಮಿಕರಿಗೆ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಸತ್ತುಹೋದ ಎಮ್ಮೆಯಿಂದ 25 ಲೀಟರ್ ಹಾಲು ಕರೆದಂತೆ, ಕಾರ್ಖಾನೆ ಮುಚ್ಚಿದ 26 ವರ್ಷ ಕಳೆದ ಬಳಿಕ ಕಾರ್ಮಿಕರಿಗೆ ಪರಿಹಾರ ನೀಡಲಾಗಿದೆ. ಕಾನೂನಿನ ಪ್ರಕಾರ ಈ ಪರಿಹಾರ ನೀಡುವುದು ಅಸಾಧ್ಯವಾಗಿತ್ತು. ಆದರೆಈಗ ಸಾಧ್ಯವಾಗಿದೆ.ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದ 350ಕ್ಕೂ ಅಧಿಕ ಕಾರ್ಮಿಕರು ಈಗಾಗಲೇ ಮೃತಪಟ್ಟಿದ್ದಾರೆ. ಹೀಗಾಗಿ ಅವರ ವಾರಸುದಾರರಿಗೆ ಪರಿಹಾರ ನೀಡಲಾಗಿದೆ. ಈ ಹಿಂದೆ ವಿತರಿಸಿದ ₹ 7 ಕೋಟಿ ಸೇರಿ ₹ 25 ಕೋಟಿ ಪರಿಹಾರವನ್ನು ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.</p>.<p>ಕಾರ್ಮಿಕ ಇಲಾಖೆಯವರನ್ನು ಕರೆದುಕೊಂಡು ತ್ರಿಪಕ್ಷೀಯ ಒಪ್ಪಂದ ಮಾಡಲಾಗಿದೆ. ಇನ್ನೂ ಒಂದು ತಿಂಗಳ ಅವಧಿಯ ಒಳಗೆ ಯಾವುದೇ ಸಂದರ್ಭದಲ್ಲಿಯೂ ಕಾರ್ಮಿಕರು ದಾಖಲಾತಿ ತೆಗೆದುಕೊಂಡು ಬಂದರೂ ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.</p>.<p>‘ಕಾರ್ಖಾನೆಯಲ್ಲಿ ಸಲ್ಲಿಸಿದ ಸೇವೆ, ಹುದ್ದೆಗೆ ಅನುಗುಣವಾಗಿ ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಒಪ್ಪಂದ ಮಾಡಿಕೊಂಡಿದ್ದು, ಕಾನೂನಿನ ಚೌಕಟ್ಟಿನಲ್ಲಿ ನೊಂದ ಕಾರ್ಮಿಕರಿಗೆ ಗರಿಷ್ಠ ಪರಿಹಾರ ಸಿಗುವಂತೆ ಮಾಡಿದ್ದೇವೆ. ₹ 25 ಕೋಟಿ ಪರಿಹಾರವನ್ನು ಕಾರ್ಮಿಕರಿಗೆ ಕೊಡಿಸುವ ಕೆಲಸ ಮಾಡಿದ್ದೇನೆ. ಆದರೆ, ಕೆಲವರು ಅದನ್ನೂ ಟೀಕೆ ಮಾಡುತ್ತಿದ್ದಾರೆ. ನೊಂದ ಕಾರ್ಮಿಕರಿಗೆ ಸಾಮರ್ಥ್ಯ ಇದ್ದವರು ಇನ್ನೂ ಹೆಚ್ಚಿನ ಪರಿಹಾರ ಕೊಡಿಸಿದರೂ ಸ್ವಾಗತಿಸುತ್ತೇನೆ’ ಎಂದು ಕುಟುಕಿದರು.</p>.<p>‘ಕೆಲವರಿಗೆ ಕಡಿಮೆ ನೀಡಲಾಗಿದೆ. ಮೋಸ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ನನಗಿಂತಲೂ ಹೆಚ್ಚಿನ ಪರಿಹಾರವನ್ನು ಸಂಸ್ಥೆಯ ಮ್ಯಾನೇಜ್ಮೆಂಟ್ನಿಂದ ಕೊಡಿಸಬಹುದು’ ಎಂದು ಹೇಳಿದರು.</p>.<p>ಮಂಗಳೂರು ವಿಭಾಗದ ಕಾರ್ಮಿಕ ಇಲಾಖೆಯ ಸಹಾಯಕ ಅಯುಕ್ತ ಶಿವಕುಮಾರ ಮಾತನಾಡಿ, ‘26 ವರ್ಷಗಳ ಜಟಿಲ ಸಮಸ್ಯೆಯನ್ನು ಬಗೆಹರಿಸುವುದು ಹೇಳಿದಷ್ಟು ಸುಲಭವಾಗಿರಲಿಲ್ಲ. ಇದರ ಹೆಚ್ಚಿನ ಶ್ರಮ ಶಾಸಕ ಆಯನೂರು ಮಂಜುನಾಥ್ ವಹಿಸಿದ್ದಾರೆ’ ಎಂದರು.</p>.<p>ಕಾರ್ಮಿಕ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿ, ‘26 ವರ್ಷದ ನಂತರ 926 ಕಾರ್ಮಿಕರಿಗೆ ಗ್ರ್ಯಾಜ್ಯುಟಿ, ಬೋನಸ್ ಎಲ್ಲವನ್ನೂ ಸೇರಿಸಿ ಪರಿಹಾರ ನೀಡಲಾಗುತ್ತಿದೆ ಎಂದರು.</p>.<p>ಸಾಂಕೇತಿಕವಾಗಿ 15 ಕಾರ್ಮಿಕರಿಗೆ ಚೆಕ್ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಕಾರ್ಖಾನೆ ಮುಚ್ಚಿದ ನಂತರವೂ ಕಾರ್ಮಿಕರಿಗೆ ಸೇರಬೇಕಿದ್ದ ಪರಿಹಾರವನ್ನು ತಲುಪಿಸಿದ್ದು ಇದೇ ಮೊದಲು. ತುಂಗಭದ್ರಾ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಕ್ರಮ ಶ್ಲಾಘನೀಯ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.</p>.<p>ಭಾನುವಾರ ಇಲ್ಲಿನ ಸಂತ ಥಾಮಸ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಕ್ಕರೆ ಕಾರ್ಖಾನೆಯ ಕಾರ್ಮಿಕರಿಗೆ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಸತ್ತುಹೋದ ಎಮ್ಮೆಯಿಂದ 25 ಲೀಟರ್ ಹಾಲು ಕರೆದಂತೆ, ಕಾರ್ಖಾನೆ ಮುಚ್ಚಿದ 26 ವರ್ಷ ಕಳೆದ ಬಳಿಕ ಕಾರ್ಮಿಕರಿಗೆ ಪರಿಹಾರ ನೀಡಲಾಗಿದೆ. ಕಾನೂನಿನ ಪ್ರಕಾರ ಈ ಪರಿಹಾರ ನೀಡುವುದು ಅಸಾಧ್ಯವಾಗಿತ್ತು. ಆದರೆಈಗ ಸಾಧ್ಯವಾಗಿದೆ.ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದ 350ಕ್ಕೂ ಅಧಿಕ ಕಾರ್ಮಿಕರು ಈಗಾಗಲೇ ಮೃತಪಟ್ಟಿದ್ದಾರೆ. ಹೀಗಾಗಿ ಅವರ ವಾರಸುದಾರರಿಗೆ ಪರಿಹಾರ ನೀಡಲಾಗಿದೆ. ಈ ಹಿಂದೆ ವಿತರಿಸಿದ ₹ 7 ಕೋಟಿ ಸೇರಿ ₹ 25 ಕೋಟಿ ಪರಿಹಾರವನ್ನು ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.</p>.<p>ಕಾರ್ಮಿಕ ಇಲಾಖೆಯವರನ್ನು ಕರೆದುಕೊಂಡು ತ್ರಿಪಕ್ಷೀಯ ಒಪ್ಪಂದ ಮಾಡಲಾಗಿದೆ. ಇನ್ನೂ ಒಂದು ತಿಂಗಳ ಅವಧಿಯ ಒಳಗೆ ಯಾವುದೇ ಸಂದರ್ಭದಲ್ಲಿಯೂ ಕಾರ್ಮಿಕರು ದಾಖಲಾತಿ ತೆಗೆದುಕೊಂಡು ಬಂದರೂ ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.</p>.<p>‘ಕಾರ್ಖಾನೆಯಲ್ಲಿ ಸಲ್ಲಿಸಿದ ಸೇವೆ, ಹುದ್ದೆಗೆ ಅನುಗುಣವಾಗಿ ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಒಪ್ಪಂದ ಮಾಡಿಕೊಂಡಿದ್ದು, ಕಾನೂನಿನ ಚೌಕಟ್ಟಿನಲ್ಲಿ ನೊಂದ ಕಾರ್ಮಿಕರಿಗೆ ಗರಿಷ್ಠ ಪರಿಹಾರ ಸಿಗುವಂತೆ ಮಾಡಿದ್ದೇವೆ. ₹ 25 ಕೋಟಿ ಪರಿಹಾರವನ್ನು ಕಾರ್ಮಿಕರಿಗೆ ಕೊಡಿಸುವ ಕೆಲಸ ಮಾಡಿದ್ದೇನೆ. ಆದರೆ, ಕೆಲವರು ಅದನ್ನೂ ಟೀಕೆ ಮಾಡುತ್ತಿದ್ದಾರೆ. ನೊಂದ ಕಾರ್ಮಿಕರಿಗೆ ಸಾಮರ್ಥ್ಯ ಇದ್ದವರು ಇನ್ನೂ ಹೆಚ್ಚಿನ ಪರಿಹಾರ ಕೊಡಿಸಿದರೂ ಸ್ವಾಗತಿಸುತ್ತೇನೆ’ ಎಂದು ಕುಟುಕಿದರು.</p>.<p>‘ಕೆಲವರಿಗೆ ಕಡಿಮೆ ನೀಡಲಾಗಿದೆ. ಮೋಸ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ನನಗಿಂತಲೂ ಹೆಚ್ಚಿನ ಪರಿಹಾರವನ್ನು ಸಂಸ್ಥೆಯ ಮ್ಯಾನೇಜ್ಮೆಂಟ್ನಿಂದ ಕೊಡಿಸಬಹುದು’ ಎಂದು ಹೇಳಿದರು.</p>.<p>ಮಂಗಳೂರು ವಿಭಾಗದ ಕಾರ್ಮಿಕ ಇಲಾಖೆಯ ಸಹಾಯಕ ಅಯುಕ್ತ ಶಿವಕುಮಾರ ಮಾತನಾಡಿ, ‘26 ವರ್ಷಗಳ ಜಟಿಲ ಸಮಸ್ಯೆಯನ್ನು ಬಗೆಹರಿಸುವುದು ಹೇಳಿದಷ್ಟು ಸುಲಭವಾಗಿರಲಿಲ್ಲ. ಇದರ ಹೆಚ್ಚಿನ ಶ್ರಮ ಶಾಸಕ ಆಯನೂರು ಮಂಜುನಾಥ್ ವಹಿಸಿದ್ದಾರೆ’ ಎಂದರು.</p>.<p>ಕಾರ್ಮಿಕ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿ, ‘26 ವರ್ಷದ ನಂತರ 926 ಕಾರ್ಮಿಕರಿಗೆ ಗ್ರ್ಯಾಜ್ಯುಟಿ, ಬೋನಸ್ ಎಲ್ಲವನ್ನೂ ಸೇರಿಸಿ ಪರಿಹಾರ ನೀಡಲಾಗುತ್ತಿದೆ ಎಂದರು.</p>.<p>ಸಾಂಕೇತಿಕವಾಗಿ 15 ಕಾರ್ಮಿಕರಿಗೆ ಚೆಕ್ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>