<p><strong>ಶಿವಮೊಗ್ಗ</strong>: ಜಿಲ್ಲೆಯಲ್ಲಿ ಒಂದೇ ದಿನ 1797 ಜನರಿಗೆ ಪರೀಕ್ಷೆ ನಡೆಸಲಾಗಿದ್ದು 179 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 5236ಕ್ಕೆತಲುಪಿದೆ.</p>.<p>ಗುರುವಾರ 35 ಜನರು ಸೇರಿದಂತೆ 2985 ಜನರು ಗುಣಮುಖರಾಗಿದ್ದಾರೆ. 2167 ಮಂದಿ ವಿವಿಧ ಆಸ್ಪತ್ರೆ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರುಮೃತಪಟ್ಟಿದ್ದಾರೆ.ಮೃತರ ಸಂಖ್ಯೆ 84ಕ್ಕೆ ಏರಿಕೆಯಾಗಿದೆ.</p>.<p>ಶಿವಮೊಗ್ಗ ನಗರದಲ್ಲೇ114 ಜನರಿಗೆ ಸೋಂಕು ತಗುಲಿದೆ. ಭದ್ರಾವತಿಯಲ್ಲಿ 31, ಶಿಕಾರಿಪುರದಲ್ಲಿ 11, ತೀರ್ಥಹಳ್ಳಿಯಲ್ಲಿ 01, ಹೊಸನಗರದಲ್ಲಿ 2, ಸೊರಬ 7, ಸಾಗರದಲ್ಲಿ6 ಹಾಗೂ ಚಿಕಿತ್ಸೆಗಾಗಿ ಇಲ್ಲಿನ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದ ಹೊರಜಿಲ್ಲೆಯ7 ಜನರಿಗೆ ಸೋಂಕು ಇರುವುದು ಖಚಿತವಾಗಿದೆ.</p>.<p><strong>11 ಮಂದಿಗೆ ಕೊರೊನಾ ಸೋಂಕು (ಶಿಕಾರಿಪುರ ವರದಿ)</strong><br /><br />ತಾಲ್ಲೂಕಿನಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದೆ.</p>.<p>ಪಟ್ಟಣದ ಶಾಂತಿನಗರ ನಿವಾಸಿ ಪುರುಷನಿಗೆ, ಜಟ್ ಪಟ್ ನಗರದ ನಿವಾಸಿ ಮೃತ ಪುರುಷನಿಗೆ, ಮುದಿಗೌಡ್ರು ಕೇರಿ ನಿವಾಸಿ ಪುರುಷನಿಗೆ, ತಾಲ್ಲೂಕಿನ ಗಾಂಧಿನಗರ ಗ್ರಾಮದ ಮೂವರು ಮಹಿಳೆಯರಿಗೆ, ಇಬ್ಬರು ಪುರುಷರಿಗೆ, ತಾಳಗುಂದ ಗ್ರಾಮದ ಮಹಿಳೆಗೆ, ಅಂಬಾರಗೊಪ್ಪ ಗ್ರಾಮದ ಪುರುಷನಿಗೆ ಕೊರೊನಾ ಸೋಂಕುಇರುವುದು ಪತ್ತೆಯಾಗಿದೆ.</p>.<p><strong>6ಮಂದಿಗೆ ಸೋಂಕು (ಸಾಗರ ವರದಿ)</strong></p>.<p><strong>ಸಾಗರ</strong>: ತಾಲ್ಲೂಕಿನಲ್ಲಿ6 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ನಗರದ ಜೋಗ ರಸ್ತೆಯ 28 ವರ್ಷದ ಪುರುಷ, 21 ವರ್ಷದ ಮಹಿಳೆ, ಗುಡ್ಡೇಮನೆ ಗ್ರಾಮದ 51 ವರ್ಷದ ಪುರುಷ, ಅಂಬಾಪುರದ 47 ವರ್ಷದ ಪುರುಷ, 9 ವರ್ಷದ ಬಾಲಕ ಸೋಂಕಿತರಾಗಿದ್ದಾರೆ.ಕಾನ್ಲೆ, ಹಾಗಲಪುರ, ಮುರುಘಾಮಠ, ಆನಂದಪುರಂ ಗ್ರಾಮಗಳಲ್ಲೂ ತಲಾ ಒಂದು ಪಾಸಿಟಿವ್ ಪ್ರಕರಣಪತ್ತೆಯಾಗಿವೆ.</p>.<p>ನಾಲ್ಕು ವರ್ಷದ ಮಗುವಿಗೆ ಸೋಂಕು (ತೀರ್ಥಹಳ್ಳಿವರದಿ):ತೀರ್ಥಹಳ್ಳಿ ಪಟ್ಟಣದ 55 ವರ್ಷದ ಪುರುಷ ಹಾಗೂ ಮಂಡಗದ್ದೆಯ 4 ವರ್ಷದ ಮಗು ಹಾಗೂ 35 ವರ್ಷದ ವ್ಯಕ್ತಿ ಗೆ ಕೊರೊನಾ ಸೋಂಕುಇದುವುದು ದೃಢಪಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಜಿಲ್ಲೆಯಲ್ಲಿ ಒಂದೇ ದಿನ 1797 ಜನರಿಗೆ ಪರೀಕ್ಷೆ ನಡೆಸಲಾಗಿದ್ದು 179 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 5236ಕ್ಕೆತಲುಪಿದೆ.</p>.<p>ಗುರುವಾರ 35 ಜನರು ಸೇರಿದಂತೆ 2985 ಜನರು ಗುಣಮುಖರಾಗಿದ್ದಾರೆ. 2167 ಮಂದಿ ವಿವಿಧ ಆಸ್ಪತ್ರೆ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರುಮೃತಪಟ್ಟಿದ್ದಾರೆ.ಮೃತರ ಸಂಖ್ಯೆ 84ಕ್ಕೆ ಏರಿಕೆಯಾಗಿದೆ.</p>.<p>ಶಿವಮೊಗ್ಗ ನಗರದಲ್ಲೇ114 ಜನರಿಗೆ ಸೋಂಕು ತಗುಲಿದೆ. ಭದ್ರಾವತಿಯಲ್ಲಿ 31, ಶಿಕಾರಿಪುರದಲ್ಲಿ 11, ತೀರ್ಥಹಳ್ಳಿಯಲ್ಲಿ 01, ಹೊಸನಗರದಲ್ಲಿ 2, ಸೊರಬ 7, ಸಾಗರದಲ್ಲಿ6 ಹಾಗೂ ಚಿಕಿತ್ಸೆಗಾಗಿ ಇಲ್ಲಿನ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದ ಹೊರಜಿಲ್ಲೆಯ7 ಜನರಿಗೆ ಸೋಂಕು ಇರುವುದು ಖಚಿತವಾಗಿದೆ.</p>.<p><strong>11 ಮಂದಿಗೆ ಕೊರೊನಾ ಸೋಂಕು (ಶಿಕಾರಿಪುರ ವರದಿ)</strong><br /><br />ತಾಲ್ಲೂಕಿನಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದೆ.</p>.<p>ಪಟ್ಟಣದ ಶಾಂತಿನಗರ ನಿವಾಸಿ ಪುರುಷನಿಗೆ, ಜಟ್ ಪಟ್ ನಗರದ ನಿವಾಸಿ ಮೃತ ಪುರುಷನಿಗೆ, ಮುದಿಗೌಡ್ರು ಕೇರಿ ನಿವಾಸಿ ಪುರುಷನಿಗೆ, ತಾಲ್ಲೂಕಿನ ಗಾಂಧಿನಗರ ಗ್ರಾಮದ ಮೂವರು ಮಹಿಳೆಯರಿಗೆ, ಇಬ್ಬರು ಪುರುಷರಿಗೆ, ತಾಳಗುಂದ ಗ್ರಾಮದ ಮಹಿಳೆಗೆ, ಅಂಬಾರಗೊಪ್ಪ ಗ್ರಾಮದ ಪುರುಷನಿಗೆ ಕೊರೊನಾ ಸೋಂಕುಇರುವುದು ಪತ್ತೆಯಾಗಿದೆ.</p>.<p><strong>6ಮಂದಿಗೆ ಸೋಂಕು (ಸಾಗರ ವರದಿ)</strong></p>.<p><strong>ಸಾಗರ</strong>: ತಾಲ್ಲೂಕಿನಲ್ಲಿ6 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ನಗರದ ಜೋಗ ರಸ್ತೆಯ 28 ವರ್ಷದ ಪುರುಷ, 21 ವರ್ಷದ ಮಹಿಳೆ, ಗುಡ್ಡೇಮನೆ ಗ್ರಾಮದ 51 ವರ್ಷದ ಪುರುಷ, ಅಂಬಾಪುರದ 47 ವರ್ಷದ ಪುರುಷ, 9 ವರ್ಷದ ಬಾಲಕ ಸೋಂಕಿತರಾಗಿದ್ದಾರೆ.ಕಾನ್ಲೆ, ಹಾಗಲಪುರ, ಮುರುಘಾಮಠ, ಆನಂದಪುರಂ ಗ್ರಾಮಗಳಲ್ಲೂ ತಲಾ ಒಂದು ಪಾಸಿಟಿವ್ ಪ್ರಕರಣಪತ್ತೆಯಾಗಿವೆ.</p>.<p>ನಾಲ್ಕು ವರ್ಷದ ಮಗುವಿಗೆ ಸೋಂಕು (ತೀರ್ಥಹಳ್ಳಿವರದಿ):ತೀರ್ಥಹಳ್ಳಿ ಪಟ್ಟಣದ 55 ವರ್ಷದ ಪುರುಷ ಹಾಗೂ ಮಂಡಗದ್ದೆಯ 4 ವರ್ಷದ ಮಗು ಹಾಗೂ 35 ವರ್ಷದ ವ್ಯಕ್ತಿ ಗೆ ಕೊರೊನಾ ಸೋಂಕುಇದುವುದು ದೃಢಪಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>