ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಆಕ್ರಮಣಕಾರಿ ಧೋರಣೆ: ಬೆಂಗಳೂರು ಗಣೇಶ, ಮಣಿಕಂಠನಿಗೆ ಗಡಿಪಾರು ಶಿಕ್ಷೆ !

ಸಕ್ರೆಬೈಲು ಆನೆ ಕ್ಯಾಂಪ್‌: ಆಕ್ರಮಣಕಾರಿ ಧೋರಣೆ, ಮಾತು ಕೇಳದ ಸ್ವಭಾವ
Published : 19 ಸೆಪ್ಟೆಂಬರ್ 2024, 5:46 IST
Last Updated : 19 ಸೆಪ್ಟೆಂಬರ್ 2024, 5:46 IST
ಫಾಲೋ ಮಾಡಿ
Comments
ಬೆಂಗಳೂರು ಗಣೇಶನನ್ನು ಈಗ ಕ್ಯಾಂಪಿಗೆ ಕರೆತಂದು ಮತ್ತೆ ಪಳಗಿಸಿ ಜನಸ್ನೇಹಿಯಾಗಿಸುವುದು ಕಷ್ಟ. ಆದರೆ ಮಣಿಕಂಠನನ್ನು ತಿಂಗಳ ಒಳಗಾಗಿ ವಾಪಸ್ ಕ್ಯಾಂಪಿಗೆ ಕರೆತಂದು ಬೇರೆ ಆನೆಗಳೊಂದಿಗೆ ಇರಿಸಲು ಮಾವುತ–ಕಾವಾಡಿಗೆ ಸೂಚಿಸಲಾಗಿದೆ.
ವಿನಯ್ ಆರ್‌ಎಫ್‌ಒ ಸಕ್ರೆಬೈಲು ಆನೆ ಕ್ಯಾಂಪ್
ಆಂಧ್ರಪ್ರದೇಶಕ್ಕೆ ಸಕ್ರೆಬೈಲು ಆನೆ?
ಆಂಧ್ರಪ್ರದೇಶದಲ್ಲಿ ಆನೆಗಳು ಹಾಗೂ ಮಾನವರ ನಡುವಿನ ಸಂಘರ್ಷ ಹೆಚ್ಚಿದೆ. ಆನೆ ದಾಳಿಯಿಂದ ಒಂದು ವರ್ಷದ ಅವಧಿಯಲ್ಲಿ 26 ಮಂದಿ ಸಾವಿಗೀಡಾಗಿದ್ದಾರೆ. ಈ ಸಂಘರ್ಷ ತಪ್ಪಿಸಿ ಕಾಡಾನೆಗಳ ಸೆರೆ ಹಿಡಿಯಲು ಆಂಧ್ರಪ್ರದೇಶ ಸರ್ಕಾರ ಕರ್ನಾಟಕದ ಕುಮ್ಮಿ (ತರಬೇತಿ ಪಡೆದ) ಆನೆಗಳ ನೆರವು ಪಡೆಯಲು ಮುಂದಾಗಿದೆ. ಮೊದಲ ಹಂತದಲ್ಲಿ ಕಳೆದ ಆಗಸ್ಟ್‌ನಲ್ಲಿ ಎಂಟು ಆನೆಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿತ್ತು. ಈಗ ಎರಡನೇ ಹಂತದಲ್ಲಿ ನಾಲ್ಕು ಆನೆಗಳಿಗೆ ಆಂಧ್ರ ಸರ್ಕಾರ ಬೇಡಿಕೆ ಸಲ್ಲಿಸಿದೆ. ಹೀಗಾಗಿ ಸಕ್ರೆಬೈಲು ಆನೆ ಕ್ಯಾಂಪಿನಿಂದಲೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಮಾಹಿತಿ ಕೇಳಿದ್ದಾರೆ. ‘ನಮಗೆ ಪಿಸಿಸಿಎಫ್‌ ಪತ್ರ ಬಂದಿದೆ. ಕ್ಯಾಂಪ್‌ನಿಂದ ಕೊಂಡೊಯ್ಯಲು ಆನೆ ಆಯ್ಕೆ ಮಾಡಲು ಆಂಧ್ರಪ್ರದೇಶದಿಂದಲೇ ಅಧಿಕಾರಿಗಳ ತಂಡ ಬಂದು ಪರಿಶೀಲಿಸಬೇಕಿದೆ. ನಂತರ ಆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಕ್ರೆಬೈಲು ಆನೆ ಕ್ಯಾಂಪ್‌ನ ಆರ್‌ಎಫ್‌ಒ ವಿನಯ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT