<p>ಸಾಗರ: ‘ಜ್ಞಾನ ಸಂಗ್ರಹದ ಅಭಿರುಚಿ ಬೆಳೆಸುವ ದೃಷ್ಟಿಕೋನ ನಮ್ಮದಾಗಬೇಕು. ಆಗ ಮಾತ್ರ ಭವಿಷ್ಯದ ಬಗ್ಗೆ ಆಶಾಭಾವ ಹೊಂದಲು ಸಾಧ್ಯ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.</p>.<p>ಶನಿವಾರ ನಡೆದ ಬ್ರಾಸಂ ಸಂಸ್ಥೆಯ ರಜತ ಮಹೋತ್ಸವ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜೀವನದ ದೃಷ್ಟಿಕೋನದ ಬಗ್ಗೆ ಸ್ಪಷ್ಟತೆ ಇಲ್ಲದೇ ಇರುವುದು ಮೌಲ್ಯಗಳ ಅಧಃಪತನಕ್ಕೆ ಕಾರಣವಾಗಿದೆ. ಜ್ಞಾನದ ದಾಹ ಹೆಚ್ಚಿಸಿಕೊಳ್ಳಲು ಪ್ರಯತ್ನಪೂರ್ವಕ ಹೆಜ್ಜೆ ಇಡುವುದು ಆರೋಗ್ಯವಂತ ಸಮಾಜದ ಲಕ್ಷಣ’ ಎಂದರು.</p>.<p>‘ಸಮಾಜದ ಪ್ರತಿಯೊಂದು ಸಮುದಾಯವೂ ಸಂಘಟಿತವಾಗ<br />ಬೇಕಿದೆ. ಸಂಘಟಿತರಾಗುವುದು ಎಂದರೆ ಮತ್ತೊಬ್ಬರನ್ನು ದ್ವೇಷಿಸುವುದು ಅಥವಾ ಮತ್ತೊಬ್ಬರಲ್ಲಿ ಕೀಳರಿಮೆ ಬೆಳೆಸುವುದು ಎಂದರ್ಥವಲ್ಲ. ಪರಸ್ಪರ ಪ್ರೀತಿ, ವಿಶ್ವಾಸದ ಕೊಂಡಿ ಬೆಳೆಸಲು ಸಂಘಟನೆಯ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದರು.</p>.<p>‘ಸಾರ್ವಜನಿಕ ಜೀವನದಲ್ಲಿ ಇರುವವರು ಸೇರಿದಂತೆ ಪ್ರತಿಯೊಬ್ಬರೂ ಸಾಮಾಜಿಕ, ರಾಷ್ಟ್ರೀಯ ಜವಾಬ್ದಾರಿಗಳ ಕುರಿತು ಎಚ್ಚರಿಸುವ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ನಮ್ಮ ಕೆಲಸ–ಕಾರ್ಯಗಳಿಗೆ ಸೀಮಿತ ಚೌಕಟ್ಟು ನಿರ್ಮಿಸಿಕೊಂಡರೆ ಯಾಂತ್ರಿಕ ಮನಸ್ಥಿತಿ ನಮ್ಮದಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಬ್ರಾಸಂ ಸಂಸ್ಥೆ 25 ವರ್ಷಗಳ ಅವಧಿಯಲ್ಲಿ ಈ ಭಾಗದ ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮದ ಕೇಂದ್ರವಾಗಿ ಬೆಳೆದಿರುವುದು ವಿಶಿಷ್ಟ ಸಂಗತಿಯಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಗರಗಳಿಗೆ ವಲಸೆ ಹೋಗಿರುವುದರಿಂದ ಇಂತಹ ಸಂಸ್ಥೆಗಳನ್ನು ಹೇಗೆ ಉಳಿಸಿ<br />ಕೊಳ್ಳಬೇಕು’ ಎಂಬ ಸವಾಲು ನಮ್ಮ ಎದುರು ಇದೆ. ಬ್ರಾಸಂ ಸಂಸ್ಥೆಯ ಶತಮಾನೋತ್ಸವದ ಆಚರಣೆಗೆ ತಕ್ಕ ಕಾರ್ಯಯೋಜನೆಯನ್ನು ಈಗಿನಿಂದಲೇ ರೂಪಿಸಬೇಕಿದೆ’ ಎಂದರು.</p>.<p>‘ನಾವು ಹವ್ಯಕರು’ ಕೃತಿಯನ್ನು ಬಿಡುಗಡೆ ಮಾಡಿದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಭೀಮೇಶ್ವರ ಜೋಷಿ, ‘ತಾವೂ ಬೆಳೆಯುತ್ತ ಇತರ ಸಮುದಾಯವನ್ನು ಬೆಳೆಸುವ ಮನಸ್ಥಿತಿ<br />ಯನ್ನು ಬ್ರಾಹ್ಮಣ ಸಮುದಾಯ ಯಾವತ್ತೂ ಹೊಂದಿದೆ. ಆಧುನಿಕತೆಯ ನಡುವೆಯೂ ಸಂಪ್ರದಾಯ<br />ಶೀಲತೆಯನ್ನು ಬಿಡದೇ ಇರುವುದು ಈ ಸಮುದಾಯದ ವಿಶಿಷ್ಟತೆ’ ಎಂದು ಹೇಳಿದರು.</p>.<p>‘ನಾವು ಹವ್ಯಕರು’ ಕೃತಿಯ ಸಂಪಾದಕ ಡಾ.ಜಿ.ಎಸ್. ಭಟ್, ‘ನಾವು ಹವ್ಯಕರು ಎನ್ನುವುದರಲ್ಲಿ ಅಹಂಕಾರವಿಲ್ಲ. ಯಾವುದೇ ಒಂದು ಜನಾಂಗ, ಉಪ ಭಾಷೆಯ ಕುರಿತ ಅಧ್ಯಯನ ಒಟ್ಟೂ ಸಮಾಜದ ಬೆಳವಣಿಗೆಗೆ ಪೂರಕವಾದ ಸಂಗತಿ ಎಂಬ ಎಚ್ಚರದೊಂದಿಗೆ ಕೃತಿಯನ್ನು ರೂಪಿಸಲಾಗಿದೆ’ ಎಂದರು.</p>.<p>‘ಹವ್ಯಕತನವನ್ನು ಇಟ್ಟುಕೊಂಡೇ ಹವ್ಯಕರು ಹೇಗೆ ಪರಿವರ್ತನೆಗೆ ಒಳಗಾಗಿದ್ದಾರೆ ಎಂಬುದರ ಅವಲೋಕನ ಕೃತಿಯಲ್ಲಿದೆ. ಹವ್ಯಕರು ಲೌಕಿಕ-ಅಲೌಕಿಕ, ವೃತ್ತಿ-ಪ್ರವೃತ್ತಿ, ಸನಾತನತೆ–ಆಧುನಿಕತೆ ಇವುಗಳ ನಡುವೆ ಸಮತೋಲನ ಸಾಧಿಸಿರುವ ಬಗೆ ಕೂಡ ಕೃತಿಯಲ್ಲಿ ವ್ಯಕ್ತವಾಗಿದೆ. ಜೊತೆಗೆ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕುರಿತ ವಿವರಗಳಿವೆ’ ಎಂದು<br />ತಿಳಿಸಿದರು.</p>.<p>ಅಪರ ಕರ್ಮ ಕಾರ್ಯದಲ್ಲಿ ತೊಡಗಿರುವ 23 ವಿಪ್ರರನ್ನು ಸನ್ಮಾನಿಸಲಾಯಿತು. ಬ್ರಾಸಂ ಅಧ್ಯಕ್ಷ ಅ.ರಾ. ಲಂಬೋದರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ.ವಿ. ರವೀಂದ್ರನಾಥ್, ಖಜಾಂಚಿ ಎಂ.ಟಿ. ಪರಮೇಶ್ವರ್ ಇದ್ದರು.</p>.<p>ವಸುಧಾ ಶರ್ಮ ಪ್ರಾರ್ಥಿಸಿದರು. ಎಚ್.ಎಸ್. ಮಂಜಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಕಟ್ಟಿನಕೆರೆ<br />ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಗರ: ‘ಜ್ಞಾನ ಸಂಗ್ರಹದ ಅಭಿರುಚಿ ಬೆಳೆಸುವ ದೃಷ್ಟಿಕೋನ ನಮ್ಮದಾಗಬೇಕು. ಆಗ ಮಾತ್ರ ಭವಿಷ್ಯದ ಬಗ್ಗೆ ಆಶಾಭಾವ ಹೊಂದಲು ಸಾಧ್ಯ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.</p>.<p>ಶನಿವಾರ ನಡೆದ ಬ್ರಾಸಂ ಸಂಸ್ಥೆಯ ರಜತ ಮಹೋತ್ಸವ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜೀವನದ ದೃಷ್ಟಿಕೋನದ ಬಗ್ಗೆ ಸ್ಪಷ್ಟತೆ ಇಲ್ಲದೇ ಇರುವುದು ಮೌಲ್ಯಗಳ ಅಧಃಪತನಕ್ಕೆ ಕಾರಣವಾಗಿದೆ. ಜ್ಞಾನದ ದಾಹ ಹೆಚ್ಚಿಸಿಕೊಳ್ಳಲು ಪ್ರಯತ್ನಪೂರ್ವಕ ಹೆಜ್ಜೆ ಇಡುವುದು ಆರೋಗ್ಯವಂತ ಸಮಾಜದ ಲಕ್ಷಣ’ ಎಂದರು.</p>.<p>‘ಸಮಾಜದ ಪ್ರತಿಯೊಂದು ಸಮುದಾಯವೂ ಸಂಘಟಿತವಾಗ<br />ಬೇಕಿದೆ. ಸಂಘಟಿತರಾಗುವುದು ಎಂದರೆ ಮತ್ತೊಬ್ಬರನ್ನು ದ್ವೇಷಿಸುವುದು ಅಥವಾ ಮತ್ತೊಬ್ಬರಲ್ಲಿ ಕೀಳರಿಮೆ ಬೆಳೆಸುವುದು ಎಂದರ್ಥವಲ್ಲ. ಪರಸ್ಪರ ಪ್ರೀತಿ, ವಿಶ್ವಾಸದ ಕೊಂಡಿ ಬೆಳೆಸಲು ಸಂಘಟನೆಯ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದರು.</p>.<p>‘ಸಾರ್ವಜನಿಕ ಜೀವನದಲ್ಲಿ ಇರುವವರು ಸೇರಿದಂತೆ ಪ್ರತಿಯೊಬ್ಬರೂ ಸಾಮಾಜಿಕ, ರಾಷ್ಟ್ರೀಯ ಜವಾಬ್ದಾರಿಗಳ ಕುರಿತು ಎಚ್ಚರಿಸುವ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ನಮ್ಮ ಕೆಲಸ–ಕಾರ್ಯಗಳಿಗೆ ಸೀಮಿತ ಚೌಕಟ್ಟು ನಿರ್ಮಿಸಿಕೊಂಡರೆ ಯಾಂತ್ರಿಕ ಮನಸ್ಥಿತಿ ನಮ್ಮದಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಬ್ರಾಸಂ ಸಂಸ್ಥೆ 25 ವರ್ಷಗಳ ಅವಧಿಯಲ್ಲಿ ಈ ಭಾಗದ ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮದ ಕೇಂದ್ರವಾಗಿ ಬೆಳೆದಿರುವುದು ವಿಶಿಷ್ಟ ಸಂಗತಿಯಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಗರಗಳಿಗೆ ವಲಸೆ ಹೋಗಿರುವುದರಿಂದ ಇಂತಹ ಸಂಸ್ಥೆಗಳನ್ನು ಹೇಗೆ ಉಳಿಸಿ<br />ಕೊಳ್ಳಬೇಕು’ ಎಂಬ ಸವಾಲು ನಮ್ಮ ಎದುರು ಇದೆ. ಬ್ರಾಸಂ ಸಂಸ್ಥೆಯ ಶತಮಾನೋತ್ಸವದ ಆಚರಣೆಗೆ ತಕ್ಕ ಕಾರ್ಯಯೋಜನೆಯನ್ನು ಈಗಿನಿಂದಲೇ ರೂಪಿಸಬೇಕಿದೆ’ ಎಂದರು.</p>.<p>‘ನಾವು ಹವ್ಯಕರು’ ಕೃತಿಯನ್ನು ಬಿಡುಗಡೆ ಮಾಡಿದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಭೀಮೇಶ್ವರ ಜೋಷಿ, ‘ತಾವೂ ಬೆಳೆಯುತ್ತ ಇತರ ಸಮುದಾಯವನ್ನು ಬೆಳೆಸುವ ಮನಸ್ಥಿತಿ<br />ಯನ್ನು ಬ್ರಾಹ್ಮಣ ಸಮುದಾಯ ಯಾವತ್ತೂ ಹೊಂದಿದೆ. ಆಧುನಿಕತೆಯ ನಡುವೆಯೂ ಸಂಪ್ರದಾಯ<br />ಶೀಲತೆಯನ್ನು ಬಿಡದೇ ಇರುವುದು ಈ ಸಮುದಾಯದ ವಿಶಿಷ್ಟತೆ’ ಎಂದು ಹೇಳಿದರು.</p>.<p>‘ನಾವು ಹವ್ಯಕರು’ ಕೃತಿಯ ಸಂಪಾದಕ ಡಾ.ಜಿ.ಎಸ್. ಭಟ್, ‘ನಾವು ಹವ್ಯಕರು ಎನ್ನುವುದರಲ್ಲಿ ಅಹಂಕಾರವಿಲ್ಲ. ಯಾವುದೇ ಒಂದು ಜನಾಂಗ, ಉಪ ಭಾಷೆಯ ಕುರಿತ ಅಧ್ಯಯನ ಒಟ್ಟೂ ಸಮಾಜದ ಬೆಳವಣಿಗೆಗೆ ಪೂರಕವಾದ ಸಂಗತಿ ಎಂಬ ಎಚ್ಚರದೊಂದಿಗೆ ಕೃತಿಯನ್ನು ರೂಪಿಸಲಾಗಿದೆ’ ಎಂದರು.</p>.<p>‘ಹವ್ಯಕತನವನ್ನು ಇಟ್ಟುಕೊಂಡೇ ಹವ್ಯಕರು ಹೇಗೆ ಪರಿವರ್ತನೆಗೆ ಒಳಗಾಗಿದ್ದಾರೆ ಎಂಬುದರ ಅವಲೋಕನ ಕೃತಿಯಲ್ಲಿದೆ. ಹವ್ಯಕರು ಲೌಕಿಕ-ಅಲೌಕಿಕ, ವೃತ್ತಿ-ಪ್ರವೃತ್ತಿ, ಸನಾತನತೆ–ಆಧುನಿಕತೆ ಇವುಗಳ ನಡುವೆ ಸಮತೋಲನ ಸಾಧಿಸಿರುವ ಬಗೆ ಕೂಡ ಕೃತಿಯಲ್ಲಿ ವ್ಯಕ್ತವಾಗಿದೆ. ಜೊತೆಗೆ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕುರಿತ ವಿವರಗಳಿವೆ’ ಎಂದು<br />ತಿಳಿಸಿದರು.</p>.<p>ಅಪರ ಕರ್ಮ ಕಾರ್ಯದಲ್ಲಿ ತೊಡಗಿರುವ 23 ವಿಪ್ರರನ್ನು ಸನ್ಮಾನಿಸಲಾಯಿತು. ಬ್ರಾಸಂ ಅಧ್ಯಕ್ಷ ಅ.ರಾ. ಲಂಬೋದರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ.ವಿ. ರವೀಂದ್ರನಾಥ್, ಖಜಾಂಚಿ ಎಂ.ಟಿ. ಪರಮೇಶ್ವರ್ ಇದ್ದರು.</p>.<p>ವಸುಧಾ ಶರ್ಮ ಪ್ರಾರ್ಥಿಸಿದರು. ಎಚ್.ಎಸ್. ಮಂಜಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಕಟ್ಟಿನಕೆರೆ<br />ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>