ಪ್ರಾಧ್ಯಾಪಕ ಬಿ.ಎಲ್.ರಾಜು, ‘ಒಂದೂ ಮುಕ್ಕಾಲು ಶತಮಾನದ ಹಿಂದೆ ಹೆಣ್ಣು ಮಕ್ಕಳಿಗಾಗಿ ಶಾಲೆ ತೆರೆಯುವ ಮೂಲಕ ಸಾವಿತ್ರಿಬಾಯಿ ಫುಲೆ ಪರೋಕ್ಷವಾಗಿ ಮನುಷ್ಯನ ಅಸ್ಮಿತೆ, ಅಸ್ತಿತ್ವ, ಪ್ರಜ್ಞೆ ಮತ್ತು ಪ್ರತಿನಿಧೀಕರಣಗಳ ಪ್ರಶ್ನೆಗಳನ್ನು ಮುನ್ನಲೆಗೆ ತಂದರು. ಶತಮಾನಗಳ ಕಾಲ ಈ ಸಮಾಜವನ್ನು ಕಂಗೆಡಿಸಿದ ಸಾಮಾಜಿಕ ಶಾಪಗಳ ವಿಮೋಚನೆಗಾಗಿ ಹಗಲಿರುಳು ದುಡಿದ ಶ್ರೇಯಸ್ಸು ಸಾವಿತ್ರಿಬಾಯಿ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.