ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 6ನೇ ಬಾರಿಗೆ ಗೆಲುವು

Last Updated 31 ಡಿಸೆಂಬರ್ 2020, 4:52 IST
ಅಕ್ಷರ ಗಾತ್ರ

ಭದ್ರಾವತಿ: ಅಂತರಗಂಗೆ ಪಂಚಾಯಿತಿ ಅಂತರಗಂಗೆ ಕ್ಷೇತ್ರದಿಂದ ಆಯ್ಕೆಯಾದ ನಾಗೇಶ್ ಆರನೇ ಬಾರಿಗೆ ಪಂಚಾಯಿತಿ ಪ್ರವೇಶಿಸಿದ್ದಾರೆ.

‘ಹಣಬಲ, ಚಿನ್ನಾಭರಣ ಹಂಚಿಕೆ ನಡುವೆಯೂ ಜನ ನನ್ನ ಕೆಲಸ ಗುರುತಿಸಿ ಪ್ರೋತ್ಸಾಹಿಸಿ ಗೆಲುವು ಕಾಣಿಸಿದ್ದು ಇದು ಅವರ ಗೆಲುವು’ಎಂದು ಪ್ರತಿಕ್ರಿಯಿಸಿದರು.

ಯರೇಹಳ್ಳಿ ಪಂಚಾಯಿತಿಗೆ ಆಯ್ಕೆಯಾದ ಸಿ.ಆರ್.ಶಿವರಾಂ ನಾಲ್ಕನೇ ಬಾರಿಗೆ ಪಂಚಾಯಿತಿ ಪ್ರವೇಶಿಸಿದ ಖುಷಿಯಲ್ಲಿದ್ದಾರೆ.

ಅರಬಿಳಚಿ ವಡ್ಡರಹಟ್ಟಿ ಎಸ್ಸಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ಧನಂಜಯ ಎಂ.ಎ. ಸ್ನಾತಕೋತ್ತರ ಪದವೀಧರ ಹಾಗೂ ಬಿಇಡಿ. ಶಿಕ್ಷಣ ಪಡೆದಿದ್ದಾರೆ.ತಮ್ಮ ಪ್ರಥಮ ಚುನಾವಣೆಯಲ್ಲೇ 260 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಅಂಗವೈಕಲ್ಯದ ನಡುವೆಯೂ ಚುನಾವಣೆ ಗೆದ್ದಿರುವ ಕಾರೇಹಳ್ಳಿ ಪಂಚಾಯಿತಿ ಸದಸ್ಯೆ ಜಿ. ಮಮತಾ ಪದವಿ ಪಡೆದು ಮೊದಲ ಚುನಾವಣೆ ಎದುರಿಸಿದ್ದಾರೆ. ಇದೇ ಪಂಚಾಯಿತಿಯಿಂದ ಆಯ್ಕೆಯಾಗಿರುವ ನಿವೃತ್ತ ಯೋಧ ಧರ್ಮರಾಯ ಗೆಲುವಿನ ಸಂಭ್ರಮ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT