<p><strong>ಹೊಳೆಹೊನ್ನೂರು:</strong> ದೇವರ ಮೇಲಿನ ಭಕ್ತಿಯ ಜೊತೆಗೆ ಮನುಷ್ಯನ ಪ್ರಯತ್ನ ಇರಬೇಕೆಂದು ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ತಿಳಿಸಿದರು.</p>.<p>ಸಮೀಪದ ಸೈದರಕಲ್ಲಹಳ್ಳಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮೆದುಳು ಆರೋಗ್ಯ ಮತ್ತು ಮನಸ್ಸಿನ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೂಢನಂಬಿಕೆಗೆ ಬಲಿಯಾಗಿ ಅನೇಕರು ಇಂದು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಸಾರ್ವಜನಿಕರು ಕೇವಲ ದೇವರ ಬಳಿ ಹೋದರೆ ಸಾಲದು, ಅದರ ಜೊತೆ ವೈದ್ಯರ ಮಾರ್ಗದರ್ಶನ ಪಡೆದು ನಮ್ಮ ಆರೋಗ್ಯದ ಜೊತೆ ಮನಸ್ಸನ್ನೂ ಹತೋಟಿಯಲ್ಲಿ ಇಡಬೇಕು ಎಂದರು.</p>.<p>ಜನರ ಆರೋಗ್ಯ ಸಮಸ್ಯೆಗಳನ್ನ ವೈದ್ಯರ ಬಳಿ ತಿಳಿಸಿದಾಗ ಮಾತ್ರ ಅವರ ಮಾನಸಿಕ ಮತ್ತು ಆರೋಗ್ಯದ ಸಮಸ್ಯೆ ಬಗೆಹರಿಯುತ್ತದೆ ಎಂದರು.</p>.<p>ಶಿವಮೊಗ್ಗ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಕಿರಣ್ ಎಸ್.ಕೆ, ಮನೋವೈದ್ಯ ಸಚಿನ್, ಬೆಂಗಳೂರಿನ ಐ.ಎಸ್.ಇ.ಸಿ. ಪ್ರೊ ಲೇಖಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ, ಪಿಡಿಒ ಸೋಮಶೇಖರಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯಾರು, ಗ್ರಾಮಸ್ಥರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆಹೊನ್ನೂರು:</strong> ದೇವರ ಮೇಲಿನ ಭಕ್ತಿಯ ಜೊತೆಗೆ ಮನುಷ್ಯನ ಪ್ರಯತ್ನ ಇರಬೇಕೆಂದು ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ತಿಳಿಸಿದರು.</p>.<p>ಸಮೀಪದ ಸೈದರಕಲ್ಲಹಳ್ಳಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮೆದುಳು ಆರೋಗ್ಯ ಮತ್ತು ಮನಸ್ಸಿನ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೂಢನಂಬಿಕೆಗೆ ಬಲಿಯಾಗಿ ಅನೇಕರು ಇಂದು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಸಾರ್ವಜನಿಕರು ಕೇವಲ ದೇವರ ಬಳಿ ಹೋದರೆ ಸಾಲದು, ಅದರ ಜೊತೆ ವೈದ್ಯರ ಮಾರ್ಗದರ್ಶನ ಪಡೆದು ನಮ್ಮ ಆರೋಗ್ಯದ ಜೊತೆ ಮನಸ್ಸನ್ನೂ ಹತೋಟಿಯಲ್ಲಿ ಇಡಬೇಕು ಎಂದರು.</p>.<p>ಜನರ ಆರೋಗ್ಯ ಸಮಸ್ಯೆಗಳನ್ನ ವೈದ್ಯರ ಬಳಿ ತಿಳಿಸಿದಾಗ ಮಾತ್ರ ಅವರ ಮಾನಸಿಕ ಮತ್ತು ಆರೋಗ್ಯದ ಸಮಸ್ಯೆ ಬಗೆಹರಿಯುತ್ತದೆ ಎಂದರು.</p>.<p>ಶಿವಮೊಗ್ಗ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಕಿರಣ್ ಎಸ್.ಕೆ, ಮನೋವೈದ್ಯ ಸಚಿನ್, ಬೆಂಗಳೂರಿನ ಐ.ಎಸ್.ಇ.ಸಿ. ಪ್ರೊ ಲೇಖಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ, ಪಿಡಿಒ ಸೋಮಶೇಖರಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯಾರು, ಗ್ರಾಮಸ್ಥರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>