<p>ಹೊಸನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಬಿಎಸ್ಎನ್ಎಲ್ ದೂರವಾಣಿ ಕೇಂದ್ರದ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಅಲ್ಲಿನ ಸಿಬ್ಬಂದಿ ಜೀವ ಭಯದಲ್ಲಿ ನಿತ್ಯವೂ ಕೆಲಸ ಮಾಡುತ್ತಿದ್ದಾರೆ.</p>.<p>ಹಲವು ದಶಕಗಳ ಹಿಂದೆ ನಿರ್ಮಾಣವಾದ ಈ ಕಟ್ಟಡ ನಿರ್ವಹಣೆ ಇಲ್ಲದೆ ಸಂಪೂರ್ಣ ಶಿಥಿಲಗೊಂಡಿದೆ. ಬೀಳುವ ಹಂತಕ್ಕೆ ತಲುಪಿದೆ. ಇದು ಮಲೆನಾಡು ಪ್ರದೇಶವಾದ ಕಾರಣ ಪ್ರತಿವರ್ಷ ಕಟ್ಟಡದ ನಿರ್ವಹಣೆ ಅನಿವಾರ್ಯ. ಆದರೆ, ಇಲಾಖೆಯ ಮೇಲಧಿಕಾರಿಗಳು ಗಮನ ಹರಿಸುತ್ತಿಲ್ಲ ಎನ್ನುವುದು ಸಿಬ್ಬಂದಿ ಅಳಲು.</p>.<p>ಕಟ್ಟಡದ ಒಳಭಾಗ ಸಂಪೂರ್ಣ ಸೋರುತ್ತಿದೆ. ಗೋಡೆಯ ಚಾವಣಿಯೂ ಹಾಳಾಗಿದೆ. ವಿದ್ಯುತ್ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕಿಟ್ ಸಂಭವಿಸುವ ಸಾಧ್ಯತೆಗಳಿವೆ. ಕಟ್ಟಡದ ಒಳಭಾಗದಲ್ಲಿ ಮರಗಳ ಬೇರುಗಳು ಬೆಳೆದು ಗೋಡೆಗಳು ಬಿರುಕು ಬಿಟ್ಟಿವೆ.</p>.<p>ಅತಿಯಾದ ಮಳೆಯಿಂದಾಗಿ ಕಟ್ಟಡದ ಒಳ ಭಾಗ ನೀರಿನಿಂದ ಜಲಾವೃತಗೊಂಡಿದೆ. ಇಲಾಖೆಗೆ ಸಂಬಂಧಪಟ್ಟ ಕಡತಗಳು ಒದ್ದೆಯಾಗಿವೆ. ಕಟ್ಟಡಕ್ಕೆ ಬಣ್ಣ ಬಳಿಯದೆ ಬಹಳಷ್ಟು ವರ್ಷಗಳಾಗಿವೆ. ಕಟ್ಟಡದ ಸುತ್ತಮುತ್ತ 5 ಅಡಿಗಳಿಗಿಂತ ಎತ್ತರದ ಗಿಡಗಳು ಬೆಳೆದು ನಿಂತಿವೆ. ನಿತ್ಯ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.</p>.<p class="Subhead">ಕಟ್ಟಡ ದುರಸ್ತಿಯ ಮನವಿಗಿಲ್ಲ ಸ್ಪಂದನೆ: ಕಳೆದ ವರ್ಷ ಕಟ್ಟಡ ಶಿಥಿಲಗೊಂಡಿತ್ತು. ದುರಸ್ತಿ ಮಾಡುವಂತೆ ಬಿಎಸ್ಎನ್ಎಲ್ ಉಪ ಪ್ರಧಾನ ವ್ಯವಸ್ಥಾಪಕರಿಗೆ ದಾಖಲೆಗಳ ಸಮೇತ ಮನವಿ ಮಾಡಲಾಗಿತ್ತು. ಆದರೆ ಇದುವರೆಗೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯ ಅಧಿಕಾರಿಗಳು.</p>.<p class="Subhead">ಅಕ್ರಮ ಚಟುವಟಿಕೆಗಳ ತಾಣ: ದೂರವಾಣಿ ಕೇಂದ್ರದ ಸುತ್ತ ಕಾಂಪೌಂಡ್ ವ್ಯವಸ್ಥೆ ಇಲ್ಲ. ಮರ, ಗಿಡ, ಪೊದೆಗಳು ಬೆಳೆದು ನಿಂತಿವೆ. ಈ ಜಾಗ ಕುಡುಕರ, ಜೂಜುಕೋರರ ತಾಣವಾಗಿದೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಕಟ್ಟಡದ ಸುತ್ತಮುತ್ತಲು ರಾಶಿರಾಶಿ ಮದ್ಯದ ಬಾಟಲಿಗಳು ಕಾಣಸಗುತ್ತವೆ.</p>.<p>‘ಕಟ್ಟಡದ ಸ್ಥಿತಿಯ ಕುರಿತು ಈಗಾಗಲೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕೂಡಲೇ ಸರಿಪಡಿಸಬೇಕಾಗಿದೆ. ನಿತ್ಯವೂ ಜೀವ ಭಯದೊಂದಿಗೆ ಕೆಲಸ ನಿರ್ವಹಿಸುತ್ತಿದ್ದೇವೆ’ ಎನ್ನುತ್ತಾರೆ ಹೊಸನಗರದ ಕಿರಿಯ ದೂರವಾಣಿ ಅಧಿಕಾರಿ ಸುಲೇಖ್ ಪದ್ಮನಾಭನ್.</p>.<p>‘ಕಟ್ಟಡ ದುರಸ್ತಿಗೆ ನೆರವು ಕೋರಿ ಅನುಮೋದನೆ ಕಳುಹಿಸಲಾಗಿದೆ. ತಾತ್ಕಾಲಿಕ ದುರಸ್ತಿ ಕಾರ್ಯ ಶೀಘ್ರ ಆರಂಭವಾಗಲಿದೆ’ ಎನ್ನುತ್ತಾರೆ ಬಿಎಸ್ಎನ್ಎಲ್ ಉಪ ಪ್ರಧಾನ ವ್ಯವಸ್ಥಾಪಕ ವೆಂಕಟೇಶ್.</p>.<p>‘ನೆಟ್ವರ್ಕ್ ಸಿಗದೆ ತಾಲ್ಲೂಕಿನ ಜನರು ಬೆಟ್ಟ, ಗುಡ್ಡಗಳನ್ನು ಏರುವ ಸ್ಥಿತಿ ಇದೆ. ಈ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಿಗುತ್ತದೆ. ತಾಂತ್ರಿಕ ಸಮಸ್ಯೆ ಎದುರಾದರೆ<br />ಹಲವು ದಿನಗಳು ಕಾಯಬೇಕು. ಕಟ್ಟಡದಿಂದ ಇರುವ ಸಿಬ್ಬಂದಿಗೆ ತೊಂದರೆಯಾದರೆ ಇರುವ ಸೌಲಭ್ಯಗಳೂ ದೊರಕುವುದಿಲ್ಲ’ ಎನ್ನುವುದು ಸಾರ್ವಜನಿಕರ ಅಳಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಬಿಎಸ್ಎನ್ಎಲ್ ದೂರವಾಣಿ ಕೇಂದ್ರದ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಅಲ್ಲಿನ ಸಿಬ್ಬಂದಿ ಜೀವ ಭಯದಲ್ಲಿ ನಿತ್ಯವೂ ಕೆಲಸ ಮಾಡುತ್ತಿದ್ದಾರೆ.</p>.<p>ಹಲವು ದಶಕಗಳ ಹಿಂದೆ ನಿರ್ಮಾಣವಾದ ಈ ಕಟ್ಟಡ ನಿರ್ವಹಣೆ ಇಲ್ಲದೆ ಸಂಪೂರ್ಣ ಶಿಥಿಲಗೊಂಡಿದೆ. ಬೀಳುವ ಹಂತಕ್ಕೆ ತಲುಪಿದೆ. ಇದು ಮಲೆನಾಡು ಪ್ರದೇಶವಾದ ಕಾರಣ ಪ್ರತಿವರ್ಷ ಕಟ್ಟಡದ ನಿರ್ವಹಣೆ ಅನಿವಾರ್ಯ. ಆದರೆ, ಇಲಾಖೆಯ ಮೇಲಧಿಕಾರಿಗಳು ಗಮನ ಹರಿಸುತ್ತಿಲ್ಲ ಎನ್ನುವುದು ಸಿಬ್ಬಂದಿ ಅಳಲು.</p>.<p>ಕಟ್ಟಡದ ಒಳಭಾಗ ಸಂಪೂರ್ಣ ಸೋರುತ್ತಿದೆ. ಗೋಡೆಯ ಚಾವಣಿಯೂ ಹಾಳಾಗಿದೆ. ವಿದ್ಯುತ್ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕಿಟ್ ಸಂಭವಿಸುವ ಸಾಧ್ಯತೆಗಳಿವೆ. ಕಟ್ಟಡದ ಒಳಭಾಗದಲ್ಲಿ ಮರಗಳ ಬೇರುಗಳು ಬೆಳೆದು ಗೋಡೆಗಳು ಬಿರುಕು ಬಿಟ್ಟಿವೆ.</p>.<p>ಅತಿಯಾದ ಮಳೆಯಿಂದಾಗಿ ಕಟ್ಟಡದ ಒಳ ಭಾಗ ನೀರಿನಿಂದ ಜಲಾವೃತಗೊಂಡಿದೆ. ಇಲಾಖೆಗೆ ಸಂಬಂಧಪಟ್ಟ ಕಡತಗಳು ಒದ್ದೆಯಾಗಿವೆ. ಕಟ್ಟಡಕ್ಕೆ ಬಣ್ಣ ಬಳಿಯದೆ ಬಹಳಷ್ಟು ವರ್ಷಗಳಾಗಿವೆ. ಕಟ್ಟಡದ ಸುತ್ತಮುತ್ತ 5 ಅಡಿಗಳಿಗಿಂತ ಎತ್ತರದ ಗಿಡಗಳು ಬೆಳೆದು ನಿಂತಿವೆ. ನಿತ್ಯ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.</p>.<p class="Subhead">ಕಟ್ಟಡ ದುರಸ್ತಿಯ ಮನವಿಗಿಲ್ಲ ಸ್ಪಂದನೆ: ಕಳೆದ ವರ್ಷ ಕಟ್ಟಡ ಶಿಥಿಲಗೊಂಡಿತ್ತು. ದುರಸ್ತಿ ಮಾಡುವಂತೆ ಬಿಎಸ್ಎನ್ಎಲ್ ಉಪ ಪ್ರಧಾನ ವ್ಯವಸ್ಥಾಪಕರಿಗೆ ದಾಖಲೆಗಳ ಸಮೇತ ಮನವಿ ಮಾಡಲಾಗಿತ್ತು. ಆದರೆ ಇದುವರೆಗೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯ ಅಧಿಕಾರಿಗಳು.</p>.<p class="Subhead">ಅಕ್ರಮ ಚಟುವಟಿಕೆಗಳ ತಾಣ: ದೂರವಾಣಿ ಕೇಂದ್ರದ ಸುತ್ತ ಕಾಂಪೌಂಡ್ ವ್ಯವಸ್ಥೆ ಇಲ್ಲ. ಮರ, ಗಿಡ, ಪೊದೆಗಳು ಬೆಳೆದು ನಿಂತಿವೆ. ಈ ಜಾಗ ಕುಡುಕರ, ಜೂಜುಕೋರರ ತಾಣವಾಗಿದೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಕಟ್ಟಡದ ಸುತ್ತಮುತ್ತಲು ರಾಶಿರಾಶಿ ಮದ್ಯದ ಬಾಟಲಿಗಳು ಕಾಣಸಗುತ್ತವೆ.</p>.<p>‘ಕಟ್ಟಡದ ಸ್ಥಿತಿಯ ಕುರಿತು ಈಗಾಗಲೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕೂಡಲೇ ಸರಿಪಡಿಸಬೇಕಾಗಿದೆ. ನಿತ್ಯವೂ ಜೀವ ಭಯದೊಂದಿಗೆ ಕೆಲಸ ನಿರ್ವಹಿಸುತ್ತಿದ್ದೇವೆ’ ಎನ್ನುತ್ತಾರೆ ಹೊಸನಗರದ ಕಿರಿಯ ದೂರವಾಣಿ ಅಧಿಕಾರಿ ಸುಲೇಖ್ ಪದ್ಮನಾಭನ್.</p>.<p>‘ಕಟ್ಟಡ ದುರಸ್ತಿಗೆ ನೆರವು ಕೋರಿ ಅನುಮೋದನೆ ಕಳುಹಿಸಲಾಗಿದೆ. ತಾತ್ಕಾಲಿಕ ದುರಸ್ತಿ ಕಾರ್ಯ ಶೀಘ್ರ ಆರಂಭವಾಗಲಿದೆ’ ಎನ್ನುತ್ತಾರೆ ಬಿಎಸ್ಎನ್ಎಲ್ ಉಪ ಪ್ರಧಾನ ವ್ಯವಸ್ಥಾಪಕ ವೆಂಕಟೇಶ್.</p>.<p>‘ನೆಟ್ವರ್ಕ್ ಸಿಗದೆ ತಾಲ್ಲೂಕಿನ ಜನರು ಬೆಟ್ಟ, ಗುಡ್ಡಗಳನ್ನು ಏರುವ ಸ್ಥಿತಿ ಇದೆ. ಈ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಿಗುತ್ತದೆ. ತಾಂತ್ರಿಕ ಸಮಸ್ಯೆ ಎದುರಾದರೆ<br />ಹಲವು ದಿನಗಳು ಕಾಯಬೇಕು. ಕಟ್ಟಡದಿಂದ ಇರುವ ಸಿಬ್ಬಂದಿಗೆ ತೊಂದರೆಯಾದರೆ ಇರುವ ಸೌಲಭ್ಯಗಳೂ ದೊರಕುವುದಿಲ್ಲ’ ಎನ್ನುವುದು ಸಾರ್ವಜನಿಕರ ಅಳಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>