ಶಿವಮೊಗ್ಗ: ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಜ.26ರಂದು ಸೊರಬ ತಾಲ್ಲೂಕು ಕೋಟಿಪುರದ ಎವರಾನ್ ಇಂಟರ್ ನ್ಯಾಷನಲ್ ರೆಸಿಡೆನ್ಸಿ ಶಾಲೆಯಲ್ಲಿ ನಡೆಯಲಿರುವ ಐದನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕಾರಿಪುರದ ಈಸೂರಿನ ಲಾವಣಿ ಕಲಾವಿದ ಬೇಗೂರು ಶಿವಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಡಿ.ಮಂಜುನಾಥ ತಿಳಿಸಿದ್ದಾರೆ.
ತಮ್ಮ ಸಿರಿಕಂಠದಿಂದ ಹೊರಹೊಮ್ಮುವ ಲಾವಣಿ, ಗೀಗೀ ಪದ, ಜನಪದ ಗೀತೆಗಳಿಂದ ಜನಜನಿತರಾದ ಶಿವಪ್ಪ ಅವರು ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಸಾಹಿತ್ಯದ ಹಾಗೂ ಜಾನಪದದ ಅಭಿರುಚಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.