‘ಮೇಲ್ನೋಟಕ್ಕೆ ಬೇಂದ್ರೆ ಅವರ ಕವಿತೆಗಳಲ್ಲಿ ಲಯ, ನಾದವೇ ಪ್ರಧಾನ ಎನ್ನುವಂತೆ ಕೇಳಿ ಕವಿಗೆ ಇಂಪು ಕೊಡುತ್ತದೆ. ಆದರೆ, ಅವರು ಕವಿತೆಗಳ ಮೂಲಕ ಲೋಕವನ್ನು ಅರ್ಥ ಮಾಡಿಕೊಳ್ಳುವ ಗ್ರಹಿಕೆಯನ್ನು ಕೂಡ ಕೊಟ್ಟಿದ್ದಾರೆ. ಹೀಗಾಗಿ ಅದೆಷ್ಟು ಸಾಂಸ್ಕೃತಿಕ ನೆನಪುಗಳನ್ನು ಬೇಂದ್ರೆ ಕಾವ್ಯ ಹೊತ್ತುಕೊಂಡು ಬಂದಿವೆ ಎಂಬ ಅರಿವು ಅವರ ಕಾವ್ಯದ ಓದಿನ ಹೊತ್ತಿಗೆ ನಮಗೆ ಇರಬೇಕು’ ಎಂದು ಅವರು ಅಭಿಪ್ರಾಯಪಟ್ಟರು.