<p><strong>ಶಿವಮೊಗ್ಗ</strong>: ಹಿಂದುತ್ವದ ಮೊದಲ ಪ್ರತಿಪಾದಕರೇ ಕನಕದಾಸರು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.</p>.<p>ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಜಾತಿಗಳ ನಡುವಿನ ಬಡಿದಾಟವನ್ನು 535 ವರ್ಷಗಳ ಹಿಂದೆಯೇ ಕನಕದಾಸರು ಒಂದೇ ವಾಕ್ಯದಲ್ಲಿ ವಿರೋಧಿಸಿದ್ದರು. ಆ ನಿಟ್ಟಿನಲ್ಲಿ ಕುಲ ಕುಲವೆಂದು ಬಡಿದಾಡದಿರಿ ಎಂದು ಹಾಡಿದ್ದರು. ಹಿಂದೂ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ಹೊಡೆದಾಟ ಬೇಡ ಎಲ್ಲರೂ ಒಂದಾಗಬೇಕೆಂದು ಹೇಳಿದ್ದರಿಂದ ಹಿಂದುತ್ವದ ಪ್ರತಿಪಾದಕರ ಸಾಲಿನಲ್ಲಿ ಕನಕದಾಸರು ಮೊದಲಿಗರಾಗುತ್ತಾರೆ ಎಂದು ತಿಳಿಸಿದರು.</p>.<p>535 ವರ್ಷಗಳ ಹಿಂದೆ ಜಾತಿಗಳ ವ್ಯವಸ್ಥೆ ಹೇಗಿತ್ತೋಆ ವ್ಯವಸ್ಥೆ ಇನ್ನೂ ಹಾಗೆಯೇ ಮುಂದುವರೆದಿದೆ. ಅದು ಮುಂದುವರೆಯಬಾರ ಹೀಗೆಯೇ ಮುಂದುವರೆದರೆ ಈ ದೇಶವನ್ನು ವಿಶ್ವವೇ ಗೌರವಿಸುವುದಿಲ್ಲ. ನಮ್ಮನ್ನೂ ಗೌರವಿಸುವುದಿಲ್ಲ. ಸಾಮಾಜಿಕ ನ್ಯಾಯದ ಮಾತುಗಳು ಕೇವಲ ಭಾಷಣಗಳಿಗೆ ಸೀಮಿತಗೊಳ್ಳುತ್ತದೆ. ಹಾಗಾಗಿ ಹಿಂದೂಗಳ ನಡುವೆ ವೈಮನಸ್ಸು ಬೆಳೆಯದಂತೆ ನೋಡಿಕೊಳ್ಳಬೇಕು ಎಂದರು.</p>.<p>'ಕನಕ ದಾಸರ ಜಯಂತಿಯ ದಿನದಂದು ರಜೆ ಘೋಷಿಸುವ ನಿರ್ಣಯ ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕಲ್ಬುರ್ಗಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಇದಕ್ಕೆ ಯಡಿಯೂರಪ್ಪ ಅವರಿಗೆ ಅಭಿನಂದಿಸುತ್ತೇನೆ ಎಂದರು.</p>.<p>ಎಲ್ಲೋ ಕೋಮು ಗಲಭೆಯಂತಹ ಘಟನೆಗಳು ನಡೆದು ಯಾರೊ ಅಮಾಯಕರು ಹತ್ಯೆಯಾಗುತ್ತಾರೆ. ಇದಕ್ಕೆ ಗಾಳಿ ಸುದ್ದಿ ಕಾರಣವಾಗಿರುತ್ತದೆ. ಹಾಗಾಗಿ ಘಟನೆ ನಡೆದ ತಕ್ಷಣ ಸಾರ್ವಜನಿಕರು ಪೊಲೀಸರಿಗೆ ತಿಳಿಸುವ ಮೂಲಕ ಗಲಭೆಗಳನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು. </p>.<p>ಮೇಯರ್ ಶಿವಕುಮಾರ್, ಕಾಂಗ್ರೆಸ್ ವಿರೋಧ ಪಕ್ಷದ ನಾಯಕಿ ರೇಖಾರಂಗನಾಥ್, ಸದಸ್ಯ ಎಚ್.ಸಿ.ಯೋಗೀಶ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಭಾಗಿಯಾಗಿದ್ದರು.</p>.<p>***</p>.<p><strong>‘ಕನಕರ ಚಿಂತನೆ ಬದುಕಿಗೆ ಅಳವಡಿಸಿಕೊಳ್ಳೋಣ’</strong></p>.<p>ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶ್ರೇಷ್ಠ ದಾಸ ಸಾಹಿತಿ ಕನಕದಾಸರು ಕುಲಕುಲವೆಂದು ಬಡಿದಾಡುವಿರೇಕೆ ಎಂಬ ಚಿಂತನೆಯನ್ನು ಮಾನವ ಕುಲಕ್ಕೆ ಒಳ್ಳೆಯದಾಗಲು ನೀಡಿದ್ದಾರೆ. ಅದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಅರ್ಥಪೂರ್ಣವಾಗುತ್ತದೆ ಎಂದರು.</p>.<p>ಕನಕದಾಸರ ಜಯಂತಿಗೆ ರಜೆಯ ಅಗತ್ಯವಿಲ್ಲ. ಅಂದು ನಾವೆಲ್ಲ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಕಾಗಿನೆಲೆ ಪೀಠದ ಶ್ರೀಗಳು ಹೇಳಿದ್ದಾರೆ. ಸರ್ಕಾರಕ್ಕೂ ವಿನಂತಿಯನ್ನು ಸಲ್ಲಿಸಿದ್ದಾರೆ ಎಂಬುದನ್ನು ರಾಘವೇಂದ್ರ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಹಿಂದುತ್ವದ ಮೊದಲ ಪ್ರತಿಪಾದಕರೇ ಕನಕದಾಸರು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.</p>.<p>ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಜಾತಿಗಳ ನಡುವಿನ ಬಡಿದಾಟವನ್ನು 535 ವರ್ಷಗಳ ಹಿಂದೆಯೇ ಕನಕದಾಸರು ಒಂದೇ ವಾಕ್ಯದಲ್ಲಿ ವಿರೋಧಿಸಿದ್ದರು. ಆ ನಿಟ್ಟಿನಲ್ಲಿ ಕುಲ ಕುಲವೆಂದು ಬಡಿದಾಡದಿರಿ ಎಂದು ಹಾಡಿದ್ದರು. ಹಿಂದೂ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ಹೊಡೆದಾಟ ಬೇಡ ಎಲ್ಲರೂ ಒಂದಾಗಬೇಕೆಂದು ಹೇಳಿದ್ದರಿಂದ ಹಿಂದುತ್ವದ ಪ್ರತಿಪಾದಕರ ಸಾಲಿನಲ್ಲಿ ಕನಕದಾಸರು ಮೊದಲಿಗರಾಗುತ್ತಾರೆ ಎಂದು ತಿಳಿಸಿದರು.</p>.<p>535 ವರ್ಷಗಳ ಹಿಂದೆ ಜಾತಿಗಳ ವ್ಯವಸ್ಥೆ ಹೇಗಿತ್ತೋಆ ವ್ಯವಸ್ಥೆ ಇನ್ನೂ ಹಾಗೆಯೇ ಮುಂದುವರೆದಿದೆ. ಅದು ಮುಂದುವರೆಯಬಾರ ಹೀಗೆಯೇ ಮುಂದುವರೆದರೆ ಈ ದೇಶವನ್ನು ವಿಶ್ವವೇ ಗೌರವಿಸುವುದಿಲ್ಲ. ನಮ್ಮನ್ನೂ ಗೌರವಿಸುವುದಿಲ್ಲ. ಸಾಮಾಜಿಕ ನ್ಯಾಯದ ಮಾತುಗಳು ಕೇವಲ ಭಾಷಣಗಳಿಗೆ ಸೀಮಿತಗೊಳ್ಳುತ್ತದೆ. ಹಾಗಾಗಿ ಹಿಂದೂಗಳ ನಡುವೆ ವೈಮನಸ್ಸು ಬೆಳೆಯದಂತೆ ನೋಡಿಕೊಳ್ಳಬೇಕು ಎಂದರು.</p>.<p>'ಕನಕ ದಾಸರ ಜಯಂತಿಯ ದಿನದಂದು ರಜೆ ಘೋಷಿಸುವ ನಿರ್ಣಯ ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕಲ್ಬುರ್ಗಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಇದಕ್ಕೆ ಯಡಿಯೂರಪ್ಪ ಅವರಿಗೆ ಅಭಿನಂದಿಸುತ್ತೇನೆ ಎಂದರು.</p>.<p>ಎಲ್ಲೋ ಕೋಮು ಗಲಭೆಯಂತಹ ಘಟನೆಗಳು ನಡೆದು ಯಾರೊ ಅಮಾಯಕರು ಹತ್ಯೆಯಾಗುತ್ತಾರೆ. ಇದಕ್ಕೆ ಗಾಳಿ ಸುದ್ದಿ ಕಾರಣವಾಗಿರುತ್ತದೆ. ಹಾಗಾಗಿ ಘಟನೆ ನಡೆದ ತಕ್ಷಣ ಸಾರ್ವಜನಿಕರು ಪೊಲೀಸರಿಗೆ ತಿಳಿಸುವ ಮೂಲಕ ಗಲಭೆಗಳನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು. </p>.<p>ಮೇಯರ್ ಶಿವಕುಮಾರ್, ಕಾಂಗ್ರೆಸ್ ವಿರೋಧ ಪಕ್ಷದ ನಾಯಕಿ ರೇಖಾರಂಗನಾಥ್, ಸದಸ್ಯ ಎಚ್.ಸಿ.ಯೋಗೀಶ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಭಾಗಿಯಾಗಿದ್ದರು.</p>.<p>***</p>.<p><strong>‘ಕನಕರ ಚಿಂತನೆ ಬದುಕಿಗೆ ಅಳವಡಿಸಿಕೊಳ್ಳೋಣ’</strong></p>.<p>ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶ್ರೇಷ್ಠ ದಾಸ ಸಾಹಿತಿ ಕನಕದಾಸರು ಕುಲಕುಲವೆಂದು ಬಡಿದಾಡುವಿರೇಕೆ ಎಂಬ ಚಿಂತನೆಯನ್ನು ಮಾನವ ಕುಲಕ್ಕೆ ಒಳ್ಳೆಯದಾಗಲು ನೀಡಿದ್ದಾರೆ. ಅದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಅರ್ಥಪೂರ್ಣವಾಗುತ್ತದೆ ಎಂದರು.</p>.<p>ಕನಕದಾಸರ ಜಯಂತಿಗೆ ರಜೆಯ ಅಗತ್ಯವಿಲ್ಲ. ಅಂದು ನಾವೆಲ್ಲ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಕಾಗಿನೆಲೆ ಪೀಠದ ಶ್ರೀಗಳು ಹೇಳಿದ್ದಾರೆ. ಸರ್ಕಾರಕ್ಕೂ ವಿನಂತಿಯನ್ನು ಸಲ್ಲಿಸಿದ್ದಾರೆ ಎಂಬುದನ್ನು ರಾಘವೇಂದ್ರ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>