ಕಾಂಗ್ರೆಸ್ ಪಡಿತರ ಅಕ್ಕಿಯ ಜೊತೆಗೆ ಬಡವರಿಗೆ ಬೇಳೆ, ಸೀಮೆಎಣ್ಣೆ, ಉಪ್ಪು, ಸಕ್ಕರೆ ಎಲ್ಲವನ್ನೂ ಕೊಟ್ಟಿತ್ತು. ಆದರೆ ಬಿಜೆಪಿ ಉಪ್ಪು, ಸೀಮೆಎಣ್ಣೆ ಇರಲಿ ಕೊಡುತ್ತಿದ್ದ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಿದೆ. ಹಾಗಿದ್ದರೂ ಜನರು ಬಿಜೆಪಿಗೆ ಏಕೆ ಮತ ಹಾಕುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಬಿಜೆಪಿ ಬಡವರಿಗೆ ಮಾಡಿರುವ ದ್ರೋಹವನ್ನು ಕಾರ್ಯಕರ್ತರು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಬೇಕು ಎಂದು ಕಿಮ್ಮನೆ ಸಲಹೆ ನೀಡಿದರು.