ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಬಾಲ್ಯದ ತೊಡಕು ಕಿರುಚಿತ್ರದಲ್ಲಿ ಕಡ್ಡಾಯ ಮತ್ತು ಉಚಿತ ಶಿಕ್ಷಣ, ಬಾಲ ಕಾರ್ಮಿಕ ಪದ್ಧತಿ ನಿಷೇಧ, ಪೋಕ್ಸೊ ಕಾಯ್ದೆ, ಕುಡಿತದ ದುಷ್ಪರಿಣಾಮಗಳನ್ನು ಬಿಂಬಿಸಿ ಸಮಾಜಕ್ಕೆ ಉತ್ತಮ ಸಂದೇಶ ಚಿತ್ರದ ವಸ್ತು ವಿಷಯವಾಗಿದೆ. ರಂಗ ಶಿಕ್ಷಕ ಶ್ರೀಕಾಂತ್ ಕುಮಟಾ ಹಾಗೂ ಸಹ ಶಿಕ್ಷಕ ಮಲ್ಲಿಕಾರ್ಜುನ ಚಲನಚಿತ್ರ ನಿರ್ದೇಶಿಸಿದ್ದರು. ವಿದ್ಯಾರ್ಥಿಗಳಾದ ಆರ್. ಶಮಂತ್, ಅನ್ನಪೂರ್ಣ, ನಿಶ್ಚಿತಾ, ಕೆ.ಎಚ್. ಸುಜಿತ್ , ಡಿ.ಎಲ್. ಶಶಾಂಕ, ಮಹಮದ್ ಸಾಹಿಲ್, ಎಚ್.ಆರ್. ಮನವಿ, ಕೆ.ಎಂ. ನಾಗಶ್ರೀ ಕೆ.ಎಲ್. ರಮ್ಯಾ, ಆರ್.ಟಿ. ಸಿಂಧು, ಆರ್.ಟಿ. ವಿವೇಕ್ ಅಭಿನಯಿಸಿದ್ದಾರೆ.