<p><strong>ಸಾಗರ</strong>: ಅದೊಂದು ಬರೋಬ್ಬರಿ 44 ಸದಸ್ಯರ ಕುಟುಂಬ. ಅವರೆಲ್ಲರೂ ವಾಸವಾಗಿರುವುದು ಒಂದೇ ಸೂರಿನಡಿ. ಮನೆಯ ಹಿಂದೆ ಮುಂದೆ ಮುಗಿಲಿಗೆ ಮುಖ ಮಾಡಿ ಬಾನೆತ್ತರಕ್ಕೆ ಬೆಳೆದಿರುವ ಅಡಿಕೆ, ತೆಂಗಿನ ಮರಗಳು, ಸುತ್ತಲೂ ನಳನಳಿಸುವ ಹಚ್ಚ ಹಸಿರಿನ ನಡುವೆಯೊಂದು ಹೆಂಚಿನ ಮನೆ...</p>.<p>ಈ ದೃಶ್ಯವನ್ನು ನೀವು ಕಣ್ತುಂಬಿಕೊಳ್ಳಬೇಕು ಎಂದರೆ ಸಾಗರ ತಾಲ್ಲೂಕಿನ ಹಿರೇನೆಲ್ಲೂರು ಸಮೀಪದ ಸಣ್ಣಮನೆ ಗ್ರಾಮಕ್ಕೆ ಬರಬೇಕು. ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ, ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎಂಬ ಮಾತು ಇಲ್ಲಿಗೆ ಬಂದರೆ ಸುಳ್ಳು ಎಂದೆನಿಸುತ್ತದೆ.</p>.<p>ಸಣ್ಣಮನೆ ಗ್ರಾಮದ ಚಂದ್ರಶೇಖರ್ ಅವರು 1982ರಲ್ಲಿ ಬಿ.ಎ. ಪದವಿ ಪೂರೈಸಿದಾಗ ಅವರೆದುರು ಸರ್ಕಾರಿ ನೌಕರಿ ಅಥವಾ ಕೃಷಿ ಈ ಎರಡು ಆಯ್ಕೆಗಳಿದ್ದವು. ತಂದೆ ಗಳಿಸಿದ ಅಲ್ಪ ಪ್ರಮಾಣದ ಕೃಷಿ ಭೂಮಿಯಲ್ಲಿ ವ್ಯವಸಾಯವನ್ನೇ ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಚಂದ್ರಶೇಖರ್ ಅಲ್ಲಿಂದ ಹಿಂದಕ್ಕೆ ತಿರುಗಿ ನೋಡಲೇ ಇಲ್ಲ.</p>.<p>ಅಡಿಕೆ, ಭತ್ತ, ಶುಂಠಿ, ಅನಾನಸ್, ಕಾಳುಮೆಣಸು, ಶೇಂಗಾ, ಜೋಳ, ಗೆಣಸು, ಮೆಣಸು, ತರಕಾರಿ ಹೀಗೆ ತರಹೇವಾರಿ ಬೆಳೆಗಳನ್ನು ತಮ್ಮ 27 ಎಕರೆ ಪ್ರದೇಶದಲ್ಲಿ ಚಂದ್ರಶೇಖರ್ ಬೆಳೆಯುತ್ತಿದ್ದಾರೆ. 30 ಆಕಳು, 10 ಎಮ್ಮೆ ಇರುವ ಅವರ ಕೊಟ್ಟಿಗೆ ಮೂಲಕವೇ ಕೃಷಿಗೆ ಬೇಕಾದ ಸಾವಯವ ಗೊಬ್ಬರ ತಯಾರಾಗುತ್ತದೆ. ಹೀಗಾಗಿ ಗೊಬ್ಬರದ ವಿಷಯದಲ್ಲಿ ಅವರು ಸ್ವಾವಲಂಬಿ.</p>.<p>ತಮ್ಮ ತೋಟದ ನಡುವೆ ದೊಡ್ಡ ಗಾತ್ರದ ಚಿಲುಮೆಯೊಂದನ್ನು ನಿರ್ಮಿಸುವ ಮೂಲಕ ಕೊಳವೆ ಬಾವಿಯಿಂದ ಬರುವ ನೀರನ್ನು ಅಲ್ಲಿ ಸಂಗ್ರಹಿಸುವ ದಾರಿಯನ್ನು ಚಂದ್ರಶೇಖರ್ ಕಂಡುಕೊಂಡಿದ್ದಾರೆ. ಚಿಲುಮೆಯಲ್ಲಿ ಸಂಗ್ರಹವಾದ ನೀರನ್ನು ಸ್ಪ್ರಿಂಕ್ಲರ್ ಮೂಲಕ ತೋಟಕ್ಕೆ ಹಾಯಿಸುತ್ತಾರೆ.</p>.<p>ಮಲೆನಾಡಿನಲ್ಲಿ ಕೃಷಿಗೆ ಇರುವ ಮುಖ್ಯ ಸಮಸ್ಯೆ ಎಂದರೆ ಕೂಲಿ ಕಾರ್ಮಿಕರದ್ದು. ಚಂದ್ರಶೇಖರ್ ಅವರ ಕುಟುಂಬದ ಹೆಚ್ಚಿನ ಸದಸ್ಯರು ಕೃಷಿ ಕೆಲಸದಲ್ಲಿ ಸ್ವತಃ ಭಾಗಿಯಾಗುವುದರಿಂದ ಅವರಿಗೆ ಈ ಸಮಸ್ಯೆ ಅಷ್ಟಾಗಿ ಕಾಡಿಲ್ಲ. ಕೊಯ್ಲಿನಂತಹ ಸಂದರ್ಭದಲ್ಲಿ ಮಾತ್ರ ಕೂಲಿಯಾಳುಗಳನ್ನು ಅವರು ಆಶ್ರಯಿಸಿದ್ದಾರೆ.</p>.<p>ಪ್ರತಿ ವರ್ಷ ಮಳೆಗಾಲದಲ್ಲಿ ವರದಾ ನದಿ ಪ್ರವಾಹದಿಂದ ಚಂದ್ರಶೇಖರ್ ಅವರಿಗೆ ಸೇರಿದ ಕೃಷಿಭೂಮಿಯ ಒಂದು ಭಾಗ ಸಂಪೂರ್ಣವಾಗಿ ಜಲಾವೃತಗೊಳ್ಳುತ್ತದೆ.</p>.<p>‘ವರದಾ ನದಿಗೆ ಚೆಕ್ ಡ್ಯಾಂ ನಿರ್ಮಿಸಿದಲ್ಲಿ ಬೆಳೆ ನಷ್ಟ ತಪ್ಪಿಸುವ ಜೊತೆಗೆ ಅಂತರ್ಜಲ ವೃದ್ಧಿಗೂ ಸಹಕಾರಿಯಾಗುತ್ತದೆ’ ಎಂಬುದು ಚಂದ್ರಶೇಖರ್ ಅವರ ಅಭಿಪ್ರಾಯ.</p>.<p>ಅಡಿಕೆ ಸಸಿಗಳ ಪೋಷಣೆಯನ್ನು ಸ್ವತಃ ಮಾಡುವ ಚಂದ್ರಶೇಖರ್ ಕುಟುಂಬ ಹೈನುಗಾರಿಕೆಯನ್ನು ಕೂಡ ನಿರ್ವಹಿಸುತ್ತಿದೆ. ಜಿಲ್ಲಾಮಟ್ಟದ ಉತ್ತಮ ಕೃಷಿಕ ಪ್ರಶಸ್ತಿಯನ್ನು ಕೃಷಿ ಇಲಾಖೆಯಿಂದ ಪಡೆದಿರುವ ಚಂದ್ರಶೇಖರ್ಗೆ ತಾವು ಕೃಷಿಕನಾಗಿರುವ ಬಗ್ಗೆ ಅಪಾರ ಹೆಮ್ಮೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ</strong>: ಅದೊಂದು ಬರೋಬ್ಬರಿ 44 ಸದಸ್ಯರ ಕುಟುಂಬ. ಅವರೆಲ್ಲರೂ ವಾಸವಾಗಿರುವುದು ಒಂದೇ ಸೂರಿನಡಿ. ಮನೆಯ ಹಿಂದೆ ಮುಂದೆ ಮುಗಿಲಿಗೆ ಮುಖ ಮಾಡಿ ಬಾನೆತ್ತರಕ್ಕೆ ಬೆಳೆದಿರುವ ಅಡಿಕೆ, ತೆಂಗಿನ ಮರಗಳು, ಸುತ್ತಲೂ ನಳನಳಿಸುವ ಹಚ್ಚ ಹಸಿರಿನ ನಡುವೆಯೊಂದು ಹೆಂಚಿನ ಮನೆ...</p>.<p>ಈ ದೃಶ್ಯವನ್ನು ನೀವು ಕಣ್ತುಂಬಿಕೊಳ್ಳಬೇಕು ಎಂದರೆ ಸಾಗರ ತಾಲ್ಲೂಕಿನ ಹಿರೇನೆಲ್ಲೂರು ಸಮೀಪದ ಸಣ್ಣಮನೆ ಗ್ರಾಮಕ್ಕೆ ಬರಬೇಕು. ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ, ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎಂಬ ಮಾತು ಇಲ್ಲಿಗೆ ಬಂದರೆ ಸುಳ್ಳು ಎಂದೆನಿಸುತ್ತದೆ.</p>.<p>ಸಣ್ಣಮನೆ ಗ್ರಾಮದ ಚಂದ್ರಶೇಖರ್ ಅವರು 1982ರಲ್ಲಿ ಬಿ.ಎ. ಪದವಿ ಪೂರೈಸಿದಾಗ ಅವರೆದುರು ಸರ್ಕಾರಿ ನೌಕರಿ ಅಥವಾ ಕೃಷಿ ಈ ಎರಡು ಆಯ್ಕೆಗಳಿದ್ದವು. ತಂದೆ ಗಳಿಸಿದ ಅಲ್ಪ ಪ್ರಮಾಣದ ಕೃಷಿ ಭೂಮಿಯಲ್ಲಿ ವ್ಯವಸಾಯವನ್ನೇ ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಚಂದ್ರಶೇಖರ್ ಅಲ್ಲಿಂದ ಹಿಂದಕ್ಕೆ ತಿರುಗಿ ನೋಡಲೇ ಇಲ್ಲ.</p>.<p>ಅಡಿಕೆ, ಭತ್ತ, ಶುಂಠಿ, ಅನಾನಸ್, ಕಾಳುಮೆಣಸು, ಶೇಂಗಾ, ಜೋಳ, ಗೆಣಸು, ಮೆಣಸು, ತರಕಾರಿ ಹೀಗೆ ತರಹೇವಾರಿ ಬೆಳೆಗಳನ್ನು ತಮ್ಮ 27 ಎಕರೆ ಪ್ರದೇಶದಲ್ಲಿ ಚಂದ್ರಶೇಖರ್ ಬೆಳೆಯುತ್ತಿದ್ದಾರೆ. 30 ಆಕಳು, 10 ಎಮ್ಮೆ ಇರುವ ಅವರ ಕೊಟ್ಟಿಗೆ ಮೂಲಕವೇ ಕೃಷಿಗೆ ಬೇಕಾದ ಸಾವಯವ ಗೊಬ್ಬರ ತಯಾರಾಗುತ್ತದೆ. ಹೀಗಾಗಿ ಗೊಬ್ಬರದ ವಿಷಯದಲ್ಲಿ ಅವರು ಸ್ವಾವಲಂಬಿ.</p>.<p>ತಮ್ಮ ತೋಟದ ನಡುವೆ ದೊಡ್ಡ ಗಾತ್ರದ ಚಿಲುಮೆಯೊಂದನ್ನು ನಿರ್ಮಿಸುವ ಮೂಲಕ ಕೊಳವೆ ಬಾವಿಯಿಂದ ಬರುವ ನೀರನ್ನು ಅಲ್ಲಿ ಸಂಗ್ರಹಿಸುವ ದಾರಿಯನ್ನು ಚಂದ್ರಶೇಖರ್ ಕಂಡುಕೊಂಡಿದ್ದಾರೆ. ಚಿಲುಮೆಯಲ್ಲಿ ಸಂಗ್ರಹವಾದ ನೀರನ್ನು ಸ್ಪ್ರಿಂಕ್ಲರ್ ಮೂಲಕ ತೋಟಕ್ಕೆ ಹಾಯಿಸುತ್ತಾರೆ.</p>.<p>ಮಲೆನಾಡಿನಲ್ಲಿ ಕೃಷಿಗೆ ಇರುವ ಮುಖ್ಯ ಸಮಸ್ಯೆ ಎಂದರೆ ಕೂಲಿ ಕಾರ್ಮಿಕರದ್ದು. ಚಂದ್ರಶೇಖರ್ ಅವರ ಕುಟುಂಬದ ಹೆಚ್ಚಿನ ಸದಸ್ಯರು ಕೃಷಿ ಕೆಲಸದಲ್ಲಿ ಸ್ವತಃ ಭಾಗಿಯಾಗುವುದರಿಂದ ಅವರಿಗೆ ಈ ಸಮಸ್ಯೆ ಅಷ್ಟಾಗಿ ಕಾಡಿಲ್ಲ. ಕೊಯ್ಲಿನಂತಹ ಸಂದರ್ಭದಲ್ಲಿ ಮಾತ್ರ ಕೂಲಿಯಾಳುಗಳನ್ನು ಅವರು ಆಶ್ರಯಿಸಿದ್ದಾರೆ.</p>.<p>ಪ್ರತಿ ವರ್ಷ ಮಳೆಗಾಲದಲ್ಲಿ ವರದಾ ನದಿ ಪ್ರವಾಹದಿಂದ ಚಂದ್ರಶೇಖರ್ ಅವರಿಗೆ ಸೇರಿದ ಕೃಷಿಭೂಮಿಯ ಒಂದು ಭಾಗ ಸಂಪೂರ್ಣವಾಗಿ ಜಲಾವೃತಗೊಳ್ಳುತ್ತದೆ.</p>.<p>‘ವರದಾ ನದಿಗೆ ಚೆಕ್ ಡ್ಯಾಂ ನಿರ್ಮಿಸಿದಲ್ಲಿ ಬೆಳೆ ನಷ್ಟ ತಪ್ಪಿಸುವ ಜೊತೆಗೆ ಅಂತರ್ಜಲ ವೃದ್ಧಿಗೂ ಸಹಕಾರಿಯಾಗುತ್ತದೆ’ ಎಂಬುದು ಚಂದ್ರಶೇಖರ್ ಅವರ ಅಭಿಪ್ರಾಯ.</p>.<p>ಅಡಿಕೆ ಸಸಿಗಳ ಪೋಷಣೆಯನ್ನು ಸ್ವತಃ ಮಾಡುವ ಚಂದ್ರಶೇಖರ್ ಕುಟುಂಬ ಹೈನುಗಾರಿಕೆಯನ್ನು ಕೂಡ ನಿರ್ವಹಿಸುತ್ತಿದೆ. ಜಿಲ್ಲಾಮಟ್ಟದ ಉತ್ತಮ ಕೃಷಿಕ ಪ್ರಶಸ್ತಿಯನ್ನು ಕೃಷಿ ಇಲಾಖೆಯಿಂದ ಪಡೆದಿರುವ ಚಂದ್ರಶೇಖರ್ಗೆ ತಾವು ಕೃಷಿಕನಾಗಿರುವ ಬಗ್ಗೆ ಅಪಾರ ಹೆಮ್ಮೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>