<p><strong>ಶಿವಮೊಗ್ಗ</strong>: ತಾಲ್ಲೂಕಿನ ತುಂಗಾ–ಭದ್ರಾ ನದಿಗಳ ಸಂಗಮ ಸ್ಥಳವಾದ ಕೂಡಲಿಯಲ್ಲಿರುವ ಮಠದಲ್ಲಿದ್ದ ಶಾರದಾಂಬೆ ದೇವಿಯ ಎರಡು ಚಿನ್ನದ ಪಾದುಕೆಗಳನ್ನು ಕಳವು ಮಾಡಲಾಗಿದೆ.</p>.<p>ಪಾದುಕೆಗಳು ಒಂದು ಕೆ.ಜಿ ತೂಕದ್ದಾಗಿದ್ದು, ಒಟ್ಟು ₹ 60 ಲಕ್ಷ ಮೌಲ್ಯ ಹೊಂದಿವೆ.</p>.<p>ಕೂಡಲಿ ಮಠದಲ್ಲಿ ಪರಂಪರಾಗತವಾಗಿ ಇರುವ ಈ ಪಾದುಕೆಗಳು ಹಾಗೂ ಬೆಳ್ಳಿಯ ಮುದ್ರೆಯನ್ನು ಮಠದ ಬೀರುವಿನಿಲ್ಲಿ ಇರಿಸಲಾಗಿತ್ತು. ಅವು ಕಳುವಾಗಿದೆ ಎಂದು ಮಠದ ಪ್ರಮುಖ ರಮೇಶ ಹುಲ್ಮನಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<p>‘ಮಠದ ಪೀಠಾಧಿಪತಿ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಶ್ರೀಗಳು ಹಿಂದಿನ ಚಾತುರ್ಮಾಸ್ಯ ಹಾಗೂ ಅನಾರೋಗ್ಯದ ನಿಮಿತ್ತ ಎಂಟು ತಿಂಗಳ ಕಾಲ ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ವಾಸವಿದ್ದರು. ಈ ಬಾರಿಯ ಚಾತುರ್ಮಾಸ್ಯದ ಕಾರಣ ಶ್ರೀಗಳು ಜುಲೈನಲ್ಲಿ ಕೂಡಲಿ ಮಠಕ್ಕೆ ಬಂದು ವಾಸ್ತವ್ಯ ಹೂಡಿದ್ದರು.</p>.<p>ಈಚೆಗೆ ದೇವಸ್ಥಾನದ ಹುಂಡಿಯನ್ನು ತೆಗೆದು ಕಾಣಿಕೆ ಹಣವನ್ನು ಬ್ಯಾಂಕ್ಗೆ ಜಮೆ ಮಾಡುವ ಮುನ್ನ ಶ್ರೀಗಳ ಸೂಚನೆಯಂತೆ ಬೀರುವಿನಲ್ಲಿ ಇಡಲುಮುಂದಾಗಿದ್ದೆವು. ಆಗ ಬೀಗದ ಕೈನಲ್ಲಿ ವ್ಯತ್ಯಾಸ ಆಗಿದ್ದು ಗಮನಕ್ಕೆ ಬಂತು. ಪರಿಶೀಲಿಸಿದಾಗ ಪಾದುಕೆಗಳು ಕಳವು ಆಗಿದ್ದು ಗೊತ್ತಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ತಾಲ್ಲೂಕಿನ ತುಂಗಾ–ಭದ್ರಾ ನದಿಗಳ ಸಂಗಮ ಸ್ಥಳವಾದ ಕೂಡಲಿಯಲ್ಲಿರುವ ಮಠದಲ್ಲಿದ್ದ ಶಾರದಾಂಬೆ ದೇವಿಯ ಎರಡು ಚಿನ್ನದ ಪಾದುಕೆಗಳನ್ನು ಕಳವು ಮಾಡಲಾಗಿದೆ.</p>.<p>ಪಾದುಕೆಗಳು ಒಂದು ಕೆ.ಜಿ ತೂಕದ್ದಾಗಿದ್ದು, ಒಟ್ಟು ₹ 60 ಲಕ್ಷ ಮೌಲ್ಯ ಹೊಂದಿವೆ.</p>.<p>ಕೂಡಲಿ ಮಠದಲ್ಲಿ ಪರಂಪರಾಗತವಾಗಿ ಇರುವ ಈ ಪಾದುಕೆಗಳು ಹಾಗೂ ಬೆಳ್ಳಿಯ ಮುದ್ರೆಯನ್ನು ಮಠದ ಬೀರುವಿನಿಲ್ಲಿ ಇರಿಸಲಾಗಿತ್ತು. ಅವು ಕಳುವಾಗಿದೆ ಎಂದು ಮಠದ ಪ್ರಮುಖ ರಮೇಶ ಹುಲ್ಮನಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<p>‘ಮಠದ ಪೀಠಾಧಿಪತಿ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಶ್ರೀಗಳು ಹಿಂದಿನ ಚಾತುರ್ಮಾಸ್ಯ ಹಾಗೂ ಅನಾರೋಗ್ಯದ ನಿಮಿತ್ತ ಎಂಟು ತಿಂಗಳ ಕಾಲ ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ವಾಸವಿದ್ದರು. ಈ ಬಾರಿಯ ಚಾತುರ್ಮಾಸ್ಯದ ಕಾರಣ ಶ್ರೀಗಳು ಜುಲೈನಲ್ಲಿ ಕೂಡಲಿ ಮಠಕ್ಕೆ ಬಂದು ವಾಸ್ತವ್ಯ ಹೂಡಿದ್ದರು.</p>.<p>ಈಚೆಗೆ ದೇವಸ್ಥಾನದ ಹುಂಡಿಯನ್ನು ತೆಗೆದು ಕಾಣಿಕೆ ಹಣವನ್ನು ಬ್ಯಾಂಕ್ಗೆ ಜಮೆ ಮಾಡುವ ಮುನ್ನ ಶ್ರೀಗಳ ಸೂಚನೆಯಂತೆ ಬೀರುವಿನಲ್ಲಿ ಇಡಲುಮುಂದಾಗಿದ್ದೆವು. ಆಗ ಬೀಗದ ಕೈನಲ್ಲಿ ವ್ಯತ್ಯಾಸ ಆಗಿದ್ದು ಗಮನಕ್ಕೆ ಬಂತು. ಪರಿಶೀಲಿಸಿದಾಗ ಪಾದುಕೆಗಳು ಕಳವು ಆಗಿದ್ದು ಗೊತ್ತಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>