ತೀರ್ಥಹಳ್ಳಿ ತಾಲ್ಲೂಕಿನ ಕುಂದಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಪುರಾತನ ಬಸದಿಯ ಒಳಾಂಗಣ
ಪುರಾತನ ಬಸದಿ?:
ಇಲ್ಲಿನ ವಾಸ್ತುಶಿಲ್ಪ ಗಳನ್ನು ಗಮನಿಸಿದರೆ ಕುಂದಾದ್ರಿ ಬೆಟ್ಟದ ಮೇಲಿರುವ ಬಸದಿಗಿಂತ ಕೆಳಗಿನ ಮಂಟಪ ಹಳೆಯದಾಗಿದೆ. ಅನಾದಿಕಾಲದಲ್ಲಿ ಮಲೆನಾಡು ಭಾಗದಲ್ಲಿ ಜೈನರ ಸಂಖ್ಯೆ ಹೆಚ್ಚಿತ್ತು. ಕುಂದಾದ್ರಿ ಜೈನರ ತೀರ್ಥಯಾತ್ರಾ ಸ್ಥಳವಾಗಿತ್ತು. ನೂರಾರು ಜೈನ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದ ಕುರುಹುಗಳಿವೆ.
ತೀರ್ಥಹಳ್ಳಿ ತಾಲ್ಲೂಕಿನ ಕುಂದಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಬಸದಿಯ ಒಳಾಂಗಣದಲ್ಲಿ ನಿಧಿಗಾಗಿ ಶೋಧನೆ ನಡೆಸಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಕುಂದಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಬಸದಿಯಯ ಮೇಲ್ಭಾಗದಲ್ಲಿ ಗಿಡಗಂಟಿಗಳು ಬೆಳೆದಿರುವುದು

ತೀರ್ಥಹಳ್ಳಿಯಲ್ಲಿ ದವಣೇಬೈಲು ಮಾತ್ರ ನಮ್ಮ ಸುಪರ್ದಿಗೆಯಲ್ಲಿದೆ. ಕುಂದಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಬಸದಿ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಪರಿಶೀಲನೆ ನಡೆಸುತ್ತೇವೆ
ಎಚ್.ಸಿ.ಕುಮಾರ್ ಪುರಾತತ್ವ ಇಲಾಖೆ ಉಪ ನಿರ್ದೇಶಕ ಶಿವಮೊಗ್ಗ
ದೇವಸ್ಥಾನದ ಅಕ್ಕಪಕ್ಕ ಊರುಗಳು ಇದ್ದಿರುವ ಸಾಧ್ಯತೆ ಇದೆ. ಮನೆಗಳಿಗೆ ಬಳಸಿದ ಹೆಂಚು ಇಟ್ಟಿಗೆ ಮುಚ್ಚಿದ ಕೆರೆಗಳು ಸುತ್ತಮುತ್ತಲೂ ಇವೆ. ಪುರಾತತ್ವ ಇಲಾಖೆ ಉತ್ಖನನ ಮಾಡಬೇಕು
ಕುಂದಾದ್ರಿ ರಾಘವೇಂದ್ರ ಹೊನ್ನೇತ್ತಾಳು ಗ್ರಾ.ಪಂ.ಸದಸ್ಯ
ಕುಂದಾದ್ರಿ ಬಸದಿಯು ರಕ್ಷಿತಾರಣ್ಯ ಪ್ರದೇಶದ ಒಳಗಿದೆ. ಗ್ರಾಮಾರಣ್ಯ ಸಮಿತಿ ಮೂಲಕ ಪ್ರವಾಸಿಗರನ್ನು ಸೆಳೆಯುವ ಕಾರ್ಯಕ್ರಮ ರೂಪಿಸುತ್ತಿದ್ದೇವೆ
ಹೇಮಗಿರಿ ಅಂಗಡಿ ಆಗುಂಬೆ ವಲಯ ಅರಣ್ಯಾಧಿಕಾರಿ