ಸರ್ಕಾರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವ ಎಸ್.ಎಸ್.ಪಾಟೀಲ್ ಅವರನ್ನು ಬದಲಿಸಿ, ಆ ಸ್ಥಾನಕ್ಕೆ ಸೋಮವಾರ ಕೆಎಎಸ್ ಅಧಿಕಾರಿ ಸಿ.ಎನ್.ಶ್ರೀಧರ್ ಅವರನ್ನು ವರ್ಗಾವಣೆ ಮಾಡಿತ್ತು. ಮಂಗಳವಾರ ವಿಶ್ವವಿದ್ಯಾಲಯಕ್ಕೆ ಬಂದ ಶ್ರೀಧರ್ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ಮಧ್ಯೆ ಸರ್ಕಾರ ತಾನೇ ಹೊರಡಿಸಿದ್ದ ಪಾಟೀಲ್ ಅವರ ವರ್ಗಾವಣೆ ಆದೇಶವನ್ನು ಒಂದೇ ದಿನದಲ್ಲಿ ರದ್ದು ಮಾಡಿತ್ತು. ಬುಧವಾರ ಕಚೇರಿಗೆ ಬಂದ ಅವರು ಎಂದಿನಂತೆ ಕುಲಸಚಿವರ ಕರ್ತವ್ಯ ಆರಂಭಿಸಿದ್ದರು.