‘ಘಾಟಿ ಕಡಿದಾಗಿರುವುದರಿಂದ ನಿರಂತರ ಮಳೆಗೆ ಮಣ್ಣು ಸಡಿಲಗೊಂಡು ಕುಸಿಯುತ್ತಿದೆ. ಪ್ರತೀ ಮಳೆಗಾಲದಲ್ಲಿ ಇದು ಆಗುತ್ತಿದೆ. ಮಣ್ಣು ಸಡಿಲವಾಗುವುದನ್ನು ತಪ್ಪಿಸಲು ಮೈಕ್ರೋ ಫೈಲಿಂಗ್ ವ್ಯವಸ್ಥೆ, ರಿಟೈನಿಂಗ್ ವಾಲ್ ನಿರ್ಮಿಸಬೇಕೆ ಎಂಬುದನ್ನು ಪರಿಶೀಲಿಸಲಾಗುವುದು. ತಜ್ಞರು ಏನು ಅಭಿಪ್ರಾಯ ಕೊಡುತ್ತಾರೋ ಆ ತಾಂತ್ರಿಕತೆ ಅಳವಡಿಸುತ್ತೇವೆ‘ ಎಂದು ಹೇಳಿದರು.