‘ಕಲಾ ಅಭಿಮಾನಿಗಳ ಆರಾಧ್ಯ ದೇವರಾದ ಡಾ.ರಾಜಕುಮಾರ್ ಅವರ ಹೆಸರು ಹೇಳಿ, ನಟ ಶಿವರಾಜಕುಮಾರ್ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮೂಲಕ ಅವರ ಗೌರವಕ್ಕೆ ಧಕ್ಕೆ ಉಂಟುಮಾಡಿದ್ದಾರೆ. ಶಿಕ್ಷಣ ಮಂತ್ರಿ ಆಗಿರುವ ಮಧು ಬಂಗಾರಪ್ಪ ದುರಹಂಕಾರಿ ಹಾಗೂ ದ್ವೇಷ ರಾಜಕರಣಕ್ಕಾಗಿ ತಂದೆ ಬಂಗಾರಪ್ಪ ಅವರ ಹೆಸರು ಬಳಕೆ ಮಾಡಿದ್ದಾರೆ. ದ್ವೇಷ ರಾಜಕರಣಕ್ಕಾಗಿ ನನ್ನ ತಂಗಿ ಗೀತಾ ಅವರನ್ನು ಚುನಾವಣೆಗೆ ನಿಲ್ಲಿಸಿದ್ದು, ಸೋಲು ಖಚಿತ. ರಾಘವೇಂದ್ರ ಅವರ ಗೆಲುವು ಶೇ 100 ಖಚಿತ’ ಎಂದ ಅವರು, ಶಿಕ್ಷಣ ಇಲಾಖೆಯ ಗಂಧಗಾಳಿ ಗೊತ್ತಿಲ್ಲದ ಮಧು ಬಂಗಾರಪ್ಪ ಕರ್ನಾಟಕದ ಪಪ್ಪು’ ಎಂದು ಲೇವಡಿ ಮಾಡಿದರು.