ಹಲವು ದಶಕಗಳಿಂದ ಬಾಕಿ ಉಳಿದಿರುವ ಈ ಸಮಸ್ಯೆ ಬಗೆಹರಿಸಲು ಜಂಟಿ ಸರ್ವೆ ನಡೆಸಬೇಕು.20 ದಿನಗಳ ಒಳಗೆಪ್ರಗತಿಯ ವರದಿ ನೀಡಬೇಕು. ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಪ್ರದೇಶದಲ್ಲಿ 8,285 ಎಕರೆ,ಕಂದಾಯ ಭೂಮಿಯಲ್ಲಿ 1,100 ಎಕರೆ,ಜಿಲ್ಲೆಯ ಗಡಿ ಭಾಗದಲ್ಲಿ387 ಎಕರೆಸೇರಿ 9,773 ಎಕರೆಜಮೀನು ಮೀಸಲಿರಿಸಲಾಗಿದೆ.ಈಗಾಗಲೇ6,303 ಎಕರೆಡಿನೋಟಿಫೈ ಮಾಡಲಾಗಿದೆ. 1982 ಎಕರೆ ಡಿನೋಟಿಫೈಗೆ ಬಾಕಿ ಇದೆ. ಜಂಟಿ ಸಮೀಕ್ಷೆ ನಂತರ 3,565 ಎಕರೆ ತಾಳೆಯಾಗಿದೆ. 2,737 ಎಕರೆ ತಾಳೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾಹಿತಿ ನೀಡಿದರು.