‘ಕಳೆದ ಬಾರಿ ಪವೀಧರರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಯನೂರು ಮಂಜುನಾಥ ಅವರು ಗೆದ್ದಿದ್ದರು. ಇದೀಗ ಅವರು ಈ ಬಾರಿ ಕಾಂಗ್ರೆಸ್ನಿಂದ ಚುನಾವಣೆ ಎದುರಿಸುತ್ತಿದ್ದಾರೆ. ಎಸ್.ಪಿ.ದಿನೇಶ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಟಿಕೆಟ್ ನೀಡಿದರೂ ಅವರು ಸೋಲು ಅನುಭವಿಸಿದ್ದಾರೆ. ಆದರೆ, ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ನಾಮಪತ್ರ ವಾಪಸ್ ಪಡೆಯುವಂತೆ ಪಕ್ಷದ ನಾಯಕರು ಮಾಡಿದ ಮನವಿಗೆ ಸ್ಪಂದಿಸಿಲ್ಲ. ದಿನೇಶ್ ಅವರು ಬಿಜೆಪಿಗೆ ಸಹಕಾರ ಮಾಡಲು ನಿಂತಂತೆ ಕಾಣುತ್ತಿದೆ’ ಎಂದು ಆರೋಪಿಸಿದರು.