<p><strong>ಶಿವಮೊಗ್ಗ:</strong> ಶರಾವತಿಕಣಿವೆಯತಲಕಳಲೆಜಲಾಶಯದಎರಡು ನಡುಗಡ್ಡೆಗಳಲ್ಲಿ ‘ಮಂಕಿ ಪಾರ್ಕ್’ಸ್ಥಾಪಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಆಗಸ್ಟ್ ಮೊದಲ ವಾರದಿಂದಲೇ ಮಂಗಗಳನ್ನು ಸೆರೆಹಿಡಿಯಲುಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.</p>.<p>ಜೋಗ ಜಲಪಾತ ತಪ್ಪಲಿನ ಕಾರ್ಗಲ್ ಪಟ್ಟಣದಿಂದ 8 ಕಿ.ಮೀ. ಅಂತರದಲ್ಲಿ ಶರಾವತಿ ವಿದ್ಯುದಾಗರಕ್ಕೆ ನೀರು ಪೂರೈಸಲು ಸಮತೋಲಿತ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯದ ಒಳಗೆ ಮೂರು ಕಿ.ಮೀ. ಅಂತರ<br />ದಲ್ಲಿ 10ರಿಂದ 15 ಹೆಕ್ಟೇರ್ ವಿಸ್ತಾರದ ದಟ್ಟ ಕಾನನವಿರುವ ಎರಡು ನಡುಗಡ್ಡೆಗಳಿವೆ. ಸೆರೆಹಿಡಿದ ಮಂಗಗಳನ್ನು ಅಲ್ಲಿಗೆ ಬಿಡಲಾಗುತ್ತದೆ.</p>.<p><strong>ಬಿಡುವ ಮೊದಲು ಸಂತಾನಶಕ್ತಿ ಹರಣ:</strong> ಸೆರೆಹಿಡಿದ ಮಂಗಗಳನ್ನು ಮಂಕಿ ಪಾರ್ಕ್ಗೆ ಬಿಡುವ ಮೊದಲು ಅವುಗಳಿಗೆಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ತಲಾ 30 ಮಂಗಗಳನ್ನು ಏಕ<br />ಕಾಲಕ್ಕೆ ಸಾಗಿಸಬಹುದಾದ ಮೂರು ಪಂಜರಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಅರಣ್ಯ ಸಿಬ್ಬಂದಿ ವ್ಯಾನ್ಗಳಲ್ಲಿ ತುಂಬಿಕೊಂಡು ಜಲಾಶಯ ತಲುಪಿದ ನಂತರ ಅಲ್ಲಿಂದ ಬೋಟ್ ಮೂಲಕ ನಡುಗಡ್ಡೆಗೆ ಸಾಗಿಸಲಾಗುತ್ತದೆ. ಮೊದಲ ಹಂತದ ಈ ಪ್ರಾಯೋಗಿಕ ಯೋಜನೆಯಲ್ಲಿ 500 ಮಂಗಗಳನ್ನು ಸಂರಕ್ಷಿಸುವ ಗುರಿಇದೆ.ಕಾಲಕಾಲಕ್ಕೆ ಸಿಗುವ ಹಣ್ಣು<br />ಗಳನ್ನು ನಿತ್ಯವೂ ಅವುಗಳಿಗೆ ಪೂರೈಸಲಾಗುತ್ತದೆ. ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ‘ಮಂಕಿ ಪಾರ್ಕ್’ಗಾಗಿಯೇ ₹ 6.25 ಕೋಟಿ ಮೀಸಲಿಟ್ಟಿತ್ತು.</p>.<p>ಹೊಸನಗರ ತಾಲ್ಲೂಕು ನಿಟ್ಟೂರು–ನಾಗೋಡಿ ಸರ್ವೆ ನಂಬರ್ 305ರಲ್ಲಿನ 400 ಎಕರೆ ಅರಣ್ಯದಲ್ಲಿ ‘ಮಂಕಿ ಪಾರ್ಕ್’ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ, ಅಲ್ಲಿನ ಭೂ ಮಾಫಿಯಾ,ಬಗರ್ಹುಕುಂ ಸಾಗುವಳಿದಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆ ತಲಕಳಲೆ ದ್ವೀಪ ಆಯ್ದುಕೊಂಡು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿತ್ತು.</p>.<p>ದ್ವೀಪದಲ್ಲಿ ಪಾರ್ಕ್ ನಿರ್ಮಾಣ ವೆಚ್ಚದಾಯಕ. ಅಲ್ಲಿ ಭಾರಿ ಸಂಖ್ಯೆಯ ಮೊಸಳೆಗಳಿದ್ದು, ಮಂಗಗಳ ಸಂತತಿ<br />ಯನ್ನೇ ನಾಶ ಮಾಡ ಬಹುದುಎನ್ನುವುದುಪರಿಸರವಾದಿಗಳ ವಾದ.</p>.<p>****</p>.<p>ಮಂಕಿ ಪಾರ್ಕ್ ಆರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಮುಂದಿನ ವಾರದಿಂದ ಮಂಗಗಳನ್ನು ಸೆರೆಹಿಡಿಯುವ ಪ್ರಕ್ರಿಯೆ ಆರಂಭಿಸಲಾಗುವುದು<br /><strong>-ರವಿಶಂಕರ್,ಮುಖ್ಯ ಅರಣ್ಯಸಂರಕ್ಷಣಾಧಿಕಾರಿ, ಶಿವಮೊಗ್ಗ ವೃತ್ತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಶರಾವತಿಕಣಿವೆಯತಲಕಳಲೆಜಲಾಶಯದಎರಡು ನಡುಗಡ್ಡೆಗಳಲ್ಲಿ ‘ಮಂಕಿ ಪಾರ್ಕ್’ಸ್ಥಾಪಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಆಗಸ್ಟ್ ಮೊದಲ ವಾರದಿಂದಲೇ ಮಂಗಗಳನ್ನು ಸೆರೆಹಿಡಿಯಲುಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.</p>.<p>ಜೋಗ ಜಲಪಾತ ತಪ್ಪಲಿನ ಕಾರ್ಗಲ್ ಪಟ್ಟಣದಿಂದ 8 ಕಿ.ಮೀ. ಅಂತರದಲ್ಲಿ ಶರಾವತಿ ವಿದ್ಯುದಾಗರಕ್ಕೆ ನೀರು ಪೂರೈಸಲು ಸಮತೋಲಿತ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯದ ಒಳಗೆ ಮೂರು ಕಿ.ಮೀ. ಅಂತರ<br />ದಲ್ಲಿ 10ರಿಂದ 15 ಹೆಕ್ಟೇರ್ ವಿಸ್ತಾರದ ದಟ್ಟ ಕಾನನವಿರುವ ಎರಡು ನಡುಗಡ್ಡೆಗಳಿವೆ. ಸೆರೆಹಿಡಿದ ಮಂಗಗಳನ್ನು ಅಲ್ಲಿಗೆ ಬಿಡಲಾಗುತ್ತದೆ.</p>.<p><strong>ಬಿಡುವ ಮೊದಲು ಸಂತಾನಶಕ್ತಿ ಹರಣ:</strong> ಸೆರೆಹಿಡಿದ ಮಂಗಗಳನ್ನು ಮಂಕಿ ಪಾರ್ಕ್ಗೆ ಬಿಡುವ ಮೊದಲು ಅವುಗಳಿಗೆಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ತಲಾ 30 ಮಂಗಗಳನ್ನು ಏಕ<br />ಕಾಲಕ್ಕೆ ಸಾಗಿಸಬಹುದಾದ ಮೂರು ಪಂಜರಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಅರಣ್ಯ ಸಿಬ್ಬಂದಿ ವ್ಯಾನ್ಗಳಲ್ಲಿ ತುಂಬಿಕೊಂಡು ಜಲಾಶಯ ತಲುಪಿದ ನಂತರ ಅಲ್ಲಿಂದ ಬೋಟ್ ಮೂಲಕ ನಡುಗಡ್ಡೆಗೆ ಸಾಗಿಸಲಾಗುತ್ತದೆ. ಮೊದಲ ಹಂತದ ಈ ಪ್ರಾಯೋಗಿಕ ಯೋಜನೆಯಲ್ಲಿ 500 ಮಂಗಗಳನ್ನು ಸಂರಕ್ಷಿಸುವ ಗುರಿಇದೆ.ಕಾಲಕಾಲಕ್ಕೆ ಸಿಗುವ ಹಣ್ಣು<br />ಗಳನ್ನು ನಿತ್ಯವೂ ಅವುಗಳಿಗೆ ಪೂರೈಸಲಾಗುತ್ತದೆ. ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ‘ಮಂಕಿ ಪಾರ್ಕ್’ಗಾಗಿಯೇ ₹ 6.25 ಕೋಟಿ ಮೀಸಲಿಟ್ಟಿತ್ತು.</p>.<p>ಹೊಸನಗರ ತಾಲ್ಲೂಕು ನಿಟ್ಟೂರು–ನಾಗೋಡಿ ಸರ್ವೆ ನಂಬರ್ 305ರಲ್ಲಿನ 400 ಎಕರೆ ಅರಣ್ಯದಲ್ಲಿ ‘ಮಂಕಿ ಪಾರ್ಕ್’ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ, ಅಲ್ಲಿನ ಭೂ ಮಾಫಿಯಾ,ಬಗರ್ಹುಕುಂ ಸಾಗುವಳಿದಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆ ತಲಕಳಲೆ ದ್ವೀಪ ಆಯ್ದುಕೊಂಡು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿತ್ತು.</p>.<p>ದ್ವೀಪದಲ್ಲಿ ಪಾರ್ಕ್ ನಿರ್ಮಾಣ ವೆಚ್ಚದಾಯಕ. ಅಲ್ಲಿ ಭಾರಿ ಸಂಖ್ಯೆಯ ಮೊಸಳೆಗಳಿದ್ದು, ಮಂಗಗಳ ಸಂತತಿ<br />ಯನ್ನೇ ನಾಶ ಮಾಡ ಬಹುದುಎನ್ನುವುದುಪರಿಸರವಾದಿಗಳ ವಾದ.</p>.<p>****</p>.<p>ಮಂಕಿ ಪಾರ್ಕ್ ಆರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಮುಂದಿನ ವಾರದಿಂದ ಮಂಗಗಳನ್ನು ಸೆರೆಹಿಡಿಯುವ ಪ್ರಕ್ರಿಯೆ ಆರಂಭಿಸಲಾಗುವುದು<br /><strong>-ರವಿಶಂಕರ್,ಮುಖ್ಯ ಅರಣ್ಯಸಂರಕ್ಷಣಾಧಿಕಾರಿ, ಶಿವಮೊಗ್ಗ ವೃತ್ತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>