ನೂತನ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ‘ಪಕ್ಷ ಹಾಗೂ ನನ್ನ ಗೆಲುವಿಗಾಗಿ ಪ್ರಮಾಣಿಕವಾಗಿ ದುಡಿಯುವ ರುದೇಶ್ ಅವರಂತಹ ಅಪಾರ ಸಂಖ್ಯೆಯ ಕಾರ್ಯಕರ್ತರಿಂದಾಗಿ ಇಂದು ದೊಡ್ಡ ಗೆಲುವು ಸಿಕ್ಕಿದೆ. ನನ್ನ ಸ್ಪರ್ಧೆ ಖಚಿತವಾದಾಗಿನಿಂದ ಇಲ್ಲಿಯವರೆಗೆ ಒಟ್ಟು 100 ದಿವಸಗಳ ಕಾಲ ಅವರು ಪಾದರಕ್ಷೆ ಧರಿಸಿಲ್ಲ. ನಾನು ಗೆದ್ದರೆ 101 ತೆಂಗಿನಕಾಯಿ ಒಡೆಯುವುದಾಗಿಯೂ ಅವರು ಹರಕೆ ಮಾಡಿಕೊಂಡಿದ್ದರು. ಗೆಲುವಿಗೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ಅಭಿನಂದನೆಗಳು’ ಎಂದರು.