ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲು ಅಗತ್ಯವಿರುವ ಕಲ್ಲು, ಮರಳು, ಮಣ್ಣುಪೂರೈಸಲು ಜಿಲ್ಲಾಡಳಿತ ಅಗತ್ಯ ಸಹಕಾರ ನೀಡುತ್ತದೆ. ಶಿವಮೊಗ್ಗ ಹೊರವಲಯದ ವರ್ತುಲರಸ್ತೆ ನಿರ್ಮಾಣಮಾಡುವಲ್ಲಿ ಯಾವುದೇ ಅಡತಡೆ ಇಲ್ಲ. ಹಲವು ದಾಖಲೆಗಳನ್ನು ನಿರ್ವಹಿಸುವ ಕಾರ್ಯ ಭರದಿಂದ ಸಾಗಿದೆ. ಈ ತಿಂಗಳ ಅಂತ್ಯಕ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಊರಗಡೂರು ಮತ್ತು ಇಸ್ಲಾಪುರಗಳಲ್ಲಿನ ಸಣ್ಣ-ಪುಟ್ಟ ಸಮಸ್ಯೆ ಇತ್ಯರ್ಥಪಡಿಸಿ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.